ಪೆರ್ಲ: ಪೆರ್ಲ-ಏತಡ್ಕ ರಸ್ತೆಯಲ್ಲಿ ಹಾನಿಗೀಡಾದ ಕಿರು ಸೇತುವೆ ದುರಸ್ತಿ ನಡೆಯಲಿರುವ ಹಿನ್ನೆಲೆಯಲ್ಲಿ ಈ ಹಾದಿಯಾಗಿ ವಾಹನಗಳ ಸಂಚಾರವನ್ನು ಜು.21ರಿಂದ ಒಂದು ತಿಂಗಳ ಕಾಲ ಸ್ಥಗಿತಗೊಳಿಸಿ ಲೋಕೋಪಯೋಗಿ ಇಲಾಖೆ ಆದೇಶ ಹೊರಡಿಸಿದೆ.
ಕಾಸರಗೋಡು-ಬದಿಯಡ್ಕ ಭಾಗದಿಂದ ಆಗಮಿಸುವ ವಾಹನಗಳು ಬದಿಯಡ್ಕದಿಂದ ಏತಡ್ಕ-ಸುಳ್ಯಪದವು ಮಾರ್ಗವಾಗಿ ಹಾಗೂ ಪೆರ್ಲ ಕಡೆಯಿಂದ ಸಂಚರಿಸುವ ವಾಹನಗಳು ಪಳ್ಳತ್ತಡ್ಕ-ಪುತ್ರಕಳ ಮೂಲಕ ಏತಡ್ಕಕ್ಕೆ ಸಂಚರಿಸಬೇಕಾಗಿದೆ.