HEALTH TIPS

ತತ್ತರಿಸುವ ಮನಸ್ಸಿಗೆ ಸಹಾಯ ಹಸ್ತ : ನೀಲೇಶ್ವರ ಬ್ಲಾಕ್ ಪಂಚಾಯತ್ ನಿಂದ ಆತ್ಮಹತ್ಯೆ ತಡೆಗಟ್ಟುವ ಕ್ಲಿನಿಕ್

           
                ಕಾಸರಗೋಡು: ಪ್ರಪಂಚದಲ್ಲಿ ಪ್ರತಿ 40 ಸೆಕೆಂಡಿಗೆ ಒಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಅಂದಾಜಿಸಲಾಗಿದೆ. ಪ್ರತಿ ವರ್ಷ 8 ಲಕ್ಷ ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಜಗತ್ತಿನ ಶೇ.20ರಷ್ಟು ಆತ್ಮಹತ್ಯೆಗಳು ಭಾರತದಲ್ಲಿ ನಡೆಯುತ್ತಿವೆ. ಇದೊಂದು ಆಘಾತಕಾರಿ ಅಂಕಿ ಅಂಶ. ಈ ಸತ್ಯವನ್ನು ಮನಗಂಡು ಹಲವು ಸಂಘ ಸಂಸ್ಥೆಗಳು ಜಾಗೃತಿ ಕಾರ್ಯಗಳನ್ನು ನಡೆಸುತ್ತಿವೆ. ಆತ್ಮಹತ್ಯೆ ವಿರುದ್ಧದ ಸಂದೇಶವನ್ನು ಸಾಮಾನ್ಯ ಜನರಿಗೆ ತಲುಪಿಸುವಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಈ ಚಿಂತನೆಯಿಂದಲೇ ನೀಲೇಶ್ವರ ಬ್ಲಾಕ್ ಪಂಚಾಯತಿಯು ಆತ್ಮಹತ್ಯೆ ತಡೆಗಟ್ಟುವ ಚಿಕಿತ್ಸಾಲಯದ ಪರಿಕಲ್ಪನೆಯನ್ನು ತಂದಿದೆ. ಬ್ಲಾಕ್ ವ್ಯಾಪ್ತಿಯ ಗ್ರಾ.ಪಂ.ಗಳಲ್ಲಿ ಆತ್ಮಹತ್ಯೆ ಪ್ರವೃತ್ತಿ ಹೊಂದಿರುವವರಿಗೆ ಸಮಾಲೋಚನೆ ಸೌಲಭ್ಯ ಕಲ್ಪಿಸಿ, ಆತ್ಮಹತ್ಯೆ ವಿರುದ್ಧ ಸಂದೇಶ ಸಾರುವುದು ಕ್ಲಿನಿಕ್ ನ ಉದ್ದೇಶವಾಗಿದೆ.
         ಯುವತಿಯರು ಮತ್ತು ಹದಿಹರೆಯದವರಲ್ಲಿ ಆತ್ಮಹತ್ಯೆಯ ಪ್ರವೃತ್ತಿ ಹೆಚ್ಚುತ್ತಿದೆ. ಕ್ಷುಲ್ಲಕ ಸಮಸ್ಯೆಗಳು ಸಹ ಜೀವನವನ್ನು ಕೊನೆಗೊಳಿಸಬಹುದು. ನೀಲೇಶ್ವರ ಬ್ಲಾಕ್ ಪಂಚಾಯತಿ ವ್ಯಾಪ್ತಿಯ ಪಂಚಾಯತಿಗಳಲ್ಲಿ ನಡೆಸಿದ ಅಧ್ಯಯನಗಳಿಂದ ಇದೇ ರೀತಿಯ ಮಾಹಿತಿಯನ್ನು ಪಡೆಯಲಾಗಿದೆ. ಇದರ ಆಧಾರದ ಮೇಲೆ 2022-23ರ ವಾರ್ಷಿಕ ಯೋಜನೆಯಲ್ಲಿ ಆತ್ಮಹತ್ಯೆ ತಡೆ ಚಿಕಿತ್ಸಾಲಯದ ಪರಿಕಲ್ಪನೆಯನ್ನು ರೂಪಿಸಲಾಗುತ್ತಿದೆ. ಆತ್ಮಹತ್ಯೆ ತಡೆ ಚಿಕಿತ್ಸಾಲಯವೂ ಒಂದು ಯೋಜನೆಯಾಗಿದ್ದು, ಈ ಯೋಜನೆಯಲ್ಲಿ ಮೊದಲ ಆದ್ಯತೆ ನೀಡಿ ಅನುμÁ್ಠನಗೊಳಿಸಲು ಪ್ರಯತ್ನಿಸಲಾಗುತ್ತಿದೆ.
          ಬ್ಲಾಕ್ ಪಂಚಾಯಿತಿ ವ್ಯಾಪ್ತಿಯ ಚೆರುವತ್ತೂರು ಸಾಮಾಜಿಕ ಆರೋಗ್ಯ ಕೇಂದ್ರದಲ್ಲಿ ಆತ್ಮಹತ್ಯೆ ತಡೆ ಕ್ಲಿನಿಕ್ ಆರಂಭಿಸಲಾಗುತ್ತಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಭಾವನೆ ಇರುವವರು ನೇರವಾಗಿ ಅಥವಾ ಕ್ಲಿನಿಕ್‍ನ ಪೋನ್ ಸಂಖ್ಯೆಯನ್ನು ಸಂಪರ್ಕಿಸುವ ಮೂಲಕ ಸಲಹೆಗಾರರ ಸಹಾಯವನ್ನು ಪಡೆಯಬಹುದು. ಕ್ಲಿನಿಕ್ ನ್ನು ಬ್ಲಾಕ್ ಪಂಚಾಯತಿ ಒಳಗೆ ಮತ್ತು ಹೊರಗೆ ವ್ಯಾಪಕವಾಗಿ ಪ್ರಚಾರ ಮಾಡಲಾಗುವುದು. ಆಗಸ್ಟ್‍ನಲ್ಲಿ ಕ್ಲಿನಿಕ್ ಕಾರ್ಯಾರಂಭ ಮಾಡಲಿದೆ. ಬ್ಲಾಕ್ ಪಂಚಾಯಿತಿಯ ಯೋಜನೆಗೆ ಜಿಲ್ಲಾ ಯೋಜನಾ ಸಮಿತಿ ಅನುಮೋದನೆ ನೀಡಿದೆ. ಕ್ಲಿನಿಕ್‍ಗೆ ಸಲಹೆಗಾರರನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
        ಯೋಜನೆಯ ಅನುμÁ್ಠನದ ಜವಾಬ್ದಾರಿಯನ್ನು ಜಿಲ್ಲಾ ಸಾಮಾಜಿಕ ನ್ಯಾಯ ಇಲಾಖೆ ಅಧಿಕಾರಿ ವಹಿಸಿಕೊಳ್ಳಲಿದ್ದಾರೆ. ನೀಲೇಶ್ವರ ಬ್ಲಾಕ್ ಪಂಚಾಯತಿ ಮತ್ತು ಹೊರಗಿನವರು ಚಿಕಿತ್ಸಾಲಯದ ಸೇವೆಗಳನ್ನು ಪಡೆಯಬಹುದು. ಚೆರುವತ್ತೂರು ಸಾಮಾಜಿಕ ಆರೋಗ್ಯ ಕೇಂದ್ರದ ಕಛೇರಿಯಿಂದ ಮತ್ತು ಚಿಕಿತ್ಸಾಲಯದ ದೂರವಾಣಿ ಸಂಖ್ಯೆಯ ಮೂಲಕ ಸಹಾಯವನ್ನು ಪಡೆಯಬಹುದು.
         ಆಪ್ತ ಸಮಾಲೋಚನೆ ನಡೆಸಿದ್ದರೆ ಎμÉ್ಟೂೀ ಜನ ಪ್ರಾಣಾಪಾಯದಿಂದ ಪಾರಾಗಬಹುದೆಂಬ ಅರಿವು ಈ ಉಪಕ್ರಮದ ಹಿಂದಿದೆ ಎಂದು ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಮಾಧವನ ಮಣಿಯೇರ ಹೇಳಿರುವರು. ಒಂದು ಕ್ಷಣದ ಭಾವ ತೀವ್ರತೆಯಿಂದ  ಜೀವ ಕಳೆದುಕೊಳ್ಳುವ ಪರಿಸ್ಥಿತಿಯನ್ನು ತಪ್ಪಿಸುವುದು ಚಿಕಿತ್ಸಾಲಯದ ಕಾರ್ಯದ ಉದ್ದೇಶವಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries