ಕಾಸರಗೋಡು: ಮುಸ್ಲಿಂ ಲೀಗ್ನ ಹಿರಿಯ ಮುಖಂಡ ಮಾಜಿ ಸಚಿವ ಚೆರ್ಕಳಂ ಅಬ್ದುಲ್ಲ ಅವರ ನಾಲ್ಕನೇ ವರ್ಷದ ಸಂಸ್ಮರಣಾ ದಿನಾಚರಣೆ ಜುಲೈ 27ರಂದು ಕಾಸರಗೋಡು ಎಂ.ಜಿ.ರಸ್ತೆ ವಿ.ಪಿ. ಟವರ್ನಲ್ಲಿ ಜರುಗಲಿದೆ. ಮುಸ್ಲಿಂ ಲೀಗ್ ಜಿಲ್ಲಾ ಸಮಿತಿ ವತಿಯಿಂದ ಕಾರ್ಯಕ್ರಮ ನಡೆಯಲಿದೆ. ಎಸ್ಟಿಯು ಮುಖಂಡ ಅಹ್ಮದ್ ಕುಟ್ಟಿ ಉನ್ನಿಕುಲಂ ಸಂಸ್ಮರಣಾ ಉಪನ್ಯಾಸ ನೀಡುವರು. ಮುಸ್ಲಿಂಲೀಗ್ ಜಿಲ್ಲಾಧ್ಯಕ್ಷ ಟಿ.ಇ.ಅಬ್ದುಲ್ಲಾ, ಪ್ರಧಾನ ಕಾರ್ಯದರ್ಶಿ ಎ.ಎಂ. ಅಬ್ದುಲ್ ರೆಹಮಾನ್ ಮುಂತಾದವರು ಪಾಲ್ಗೊಳ್ಳುವರು.