HEALTH TIPS

ಬೆದ್ರಡ್ಕದ ಕೆಇಎಲ್-ಇಎಂಎಲ್‍ಗೆ ಕೇಂದ್ರ: ಬೃಹತ್ ಕೈಗಾರಿಕಾ ಇಲಾಖೆ ಅಧಿಕಾರಿಗಳ ತಂಡದ ಭೇಟಿ

                                              

                ಕಾಸರಗೋಡು: ನವೀಕರಿಸಲಾದ ಬೆದ್ರಡ್ಕದ ಕೆಇಎಲ್-ಇಎಂಎಲ್‍ನ ಚಟುವಟಿಕೆಗಳ ಬಗ್ಗೆ ಅವಲೋಕನ ನಡೆಸುವ ನಿಟ್ಟಿನಲ್ಲಿ ಕೇಂದ್ರ ಬೃಹತ್ ಕೈಗಾರಿಕಾ ಇಲಾಖೆ ಕಾರ್ಯದರ್ಶಿ ಅರುಣ್ ಗೋಯಲ್ 

                    ಸಂಸ್ಥೆಗೆ ಭೇಟಿ ನೀಡಿದರು. ಅವರನ್ನು ಕೆಇಎಲ್ ಇಎಂಎಲ್ ವ್ಯವಸ್ಥಾಪಕ ನಿರ್ದೇಶಕ ಕರ್ನಲ್ (ನಿವೃತ್ತ) ಶಾಜಿ ವರ್ಗೀಸ್ ಬರಮಾಡಿಕೊಂಡರು. 

                  ಕೇಂದ್ರ ಸರ್ಕಾರದ ಅಧೀನದಲ್ಲಿದ್ದ ಸಂಸ್ಥೆಯನ್ನು ರಾಜ್ಯ ಸರ್ಕಾರಕ್ಕೆ ವರ್ಗಾಯಿಸಿದ ನಂತರ ಕೈಗಾರಿಕೆಯಲ್ಲಿ ಉಂಟಾಗಿರುವ ಪುರೋಗತಿಯ ಬಗ್ಗೆ ಸಂಸ್ಥೆ  ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರು, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಪಿಎಂ ಮುಹಮ್ಮದ್ ಹನೀಶ್ ಅವರೊಂದಿಗೆ ಅರುಣ್ ಗೋಯಲ್ ಚರ್ಚೆ ನಡೆಸಿದರು. ಕಂಪನಿಯ ಮುಂದಿನ ಚಟುವಟಿಕೆಗಳಿಗೆ ಎಲ್ಲ ನೆರವು ನೀಡುವುದಾಗಿ ಘೋಷಿಸಿದರು. ಉತ್ಪಾದನಾ ಘಟಕಕ್ಕೂ ಅಧಿಕಾರಿಗಳ ತಂಡ ಭೇಟಿ ನೀಡಿ ಮೌಲ್ಯಮಾಪನ ನಡೆಸಿದರು. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್, ಜಿಲ್ಲಾ ಕೈಗಾರಿಕಾ ಕೇಂದ್ರದ ಪ್ರಧಾನ ವ್ಯವಸ್ಥಾಪಕ ಕೆ.ಸಜಿತ್ ಕುಮಾರ್ ಉಪಸ್ಥಿತರಿದ್ದರು.

              ರೈಲ್ವೆಯ ಉತ್ಪಾದನಾ ಧಾರಣೆಯನ್ನು ಪರಿಶೀಲಿಸುವ ನಿಟ್ಟಿನಲ್ಲಿ ಆರ್‍ಡಿಎಸ್‍ಒ ನಿರ್ದೇಶಕ ಜಿತೇಂದ್ರ ಯಾದವ ಮತ್ತು ಸೆಕ್ಷನ್ ಎಂಜಿನಿಯರ್ ಶ್ರವಣ್ ಕುಮಾರ್ ಅವರೂ ಕೆಇಎಲ್-ಇಎಂಎಲ್ ಸಂದರ್ಶನ ನಡೆಸಿ ಗುಣಮಟ್ಟದ ಬಗ್ಗೆ ತೃಪ್ತಿ ವಯಕ್ತಪಡಿಸಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries