ಬದಿಯಡ್ಕ: ಎಸ್.ಎಸ್.ಎಲ್.ಸಿ. ಪ್ಲಸ್ಟು ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲೂ ಎ ಪ್ಲಸ್ ಅಂಕಗಳೊಂದಿಗೆ ತೇರ್ಗಡೆಯಾದ ಮೊಗೇರ ಸಮುದಾಯದ ವಿದ್ಯಾರ್ಥಿ/ವಿದ್ಯಾರ್ಥಿನಿಯವರನ್ನು ನಗದು ಸ್ಮರಣಿಕೆಯೊಂದಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಗುವುದು. ಸಿ.ಬಿ.ಯಸ್.ಇ ಸಹಿತ ಅರ್ಹ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿ, ಜಾತಿ ಪ್ರಮಾಣಪತ್ರ ನಕಲು ಹಾಗೂ ಒಂದು ಪಾಸ್ಪೋರ್ಟ್ ಫೋಟೋದೊಂದಿಗೆ ಲಿಖಿತ ಅರ್ಜಿಯನ್ನು ಆ. 7ಕ್ಕೆ ಮೊದಲು ಕೃಷ್ಣನ್ ಕೆ.ಕೆ. ಸ್ವಾಮಿಕೃಪಾ, ಪ್ರಧಾನ ಕಾರ್ಯದರ್ಶಿ ಮೊಗೇರ ಸರ್ವೀಸ್ ಸೊಸೈಟಿ, ಸ್ವಾಮಿಕೃಪಾ, ಕನ್ನೆಪ್ಪಾಡಿ ಅಂಚೆ:ನೀರ್ಚಾಲು, ಕಾಸರಗೋಡು, 671321 ಎಂಬ ವಿಳಾಸಕ್ಕೆ ಕಳುಹಿಸಬೇಕು. ಹೆಚ್ಚಿನ ವಿವರಗಳಿಗೆ 9645604982 ಸಂಪರ್ಕಿಸಬಹುದಾಗಿದೆ ಎಂದು ತಿಳಿಸಲಾಗಿದೆ.
ಮೊಗೇರ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
0
July 27, 2022