HEALTH TIPS

ಮಾವೋವಾದಿ ನಾಯಕ ರೂಪೇಶ್ ವಿರುದ್ಧ ಯುಎಪಿಎ ಮರುಸ್ಥಾಪಿಸಲು ರಾಜ್ಯ ಸರ್ಕಾರದಿಂದ ಸುಪ್ರೀಂ ಕೋರ್ಟ್ ಗೆ ಅರ್ಜಿ

            
            ನವದೆಹಲಿ: ಮಾವೋವಾದಿ ನಾಯಕ ರೂಪೇಶ್ ವಿರುದ್ಧ ರಾಜ್ಯದ ವಿವಿಧ ಠಾಣೆಗಳಲ್ಲಿ ದಾಖಲಾಗಿರುವ ಮೂರು ಪ್ರಕರಣಗಳಲ್ಲಿ ಯುಎಪಿಎ ಸೆಕ್ಷನ್‍ಗಳನ್ನು ಮರುಸ್ಥಾಪಿಸಲು ರಾಜ್ಯ ಸರ್ಕಾರ ಬಯಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
         ಹೈಕೋರ್ಟ್ ವಿಭಾಗೀಯ ಪೀಠದ ತೀರ್ಪಿಗೆ ತುರ್ತಾಗಿ ತಡೆಯಾಜ್ಞೆ ನೀಡಬೇಕು ಮತ್ತು ಹೈಕೋರ್ಟ್‍ನ ಕ್ರಮವು ಪ್ರಕರಣಗಳ ಅರ್ಹತೆಯನ್ನು ಆಧರಿಸಿಲ್ಲ ಎಂದು ಸರ್ಕಾರ ಅರ್ಜಿಯಲ್ಲಿ ಆರೋಪಿಸಿದೆ.
            ನಿμÉೀಧಿತ ಸಂಘಟನೆಯ ಕರಪತ್ರಗಳನ್ನು ಹಂಚಿದ್ದ ಆರೋಪದ ಮೇಲೆ ರೂಪೇಶ್ ವಿರುದ್ಧ 2013ರಲ್ಲಿ ಕುಟ್ಯಾಡಿ ಪೋಲೀಸ್ ಠಾಣೆಯಲ್ಲಿ ಎರಡು ಹಾಗೂ 2014ರಲ್ಲಿ ವಾಲಯಂ ಪೋಲೀಸ್ ಠಾಣೆಯಲ್ಲಿ ಒಂದು ಪ್ರಕರಣದಲ್ಲಿ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
         ಪ್ರಕರಣದಲ್ಲಿ ಯುಎಪಿಎ ವಿಧಿಸಲು ಪುರಾವೆಗಳನ್ನು ನಿರ್ದಿಷ್ಟಪಡಿಸಿ ತನಿಖಾ ತಂಡ ಸಲ್ಲಿಸಿರುವ ವರದಿಯ ಬಗ್ಗೆ ಪ್ರಾಧಿಕಾರವು ಒಂದು ವಾರದೊಳಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಷರತ್ತು ಹೇಳಿದೆ. ಆದರೆ ರೂಪೇಶ್ ಪ್ರಕರಣದಲ್ಲಿ ಹೈಕೋರ್ಟ್ ರೂಪೇಶ್ ಪರವಾಗಿ ತೀರ್ಪು ನೀಡಿದ್ದು, ಆರು ತಿಂಗಳವರೆಗೆ ಸಮಯ ತೆಗೆದುಕೊಂಡಿದೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries