HEALTH TIPS

ವಿವಿಧ ಬೇಡಿಕೆ ಈಡೇರಿಕೆಗಾಗಿ ಕೆಪಿಎಸ್‍ಟಿಎ ವತಿಯಿಂದ ಧರಣಿ


              ಬದಿಯಡ್ಕ: ಕೇರಳ ಪ್ರದೇಶ್ ಸ್ಕೂಲ್ ಟೀಚರ್ಸ್ ಅಸೋಸಿಯೇಷನ್(ಕೆಪಿಎಸ್‍ಟಿಎ)ವತಿಯಿಂದ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಯಿತು.
            ಶಾಲಾ ಮಧ್ಯಾಹ್ನದ ಬಿಸಿ ಊಟದ ಬಾಕಿ ಮೊತ್ತವನ್ನು ಶೀಘ್ರ ವಿತರಿಸಬೇಕು, ಮೊತ್ತವನ್ನು ಹೆಚ್ಚಿಸಬೇಕು, ಖಾದರ್ ಸಮಿತಿಯನ್ನು ರದ್ದುಗೊಳಿಸಬೇಕು, ಅಧ್ಯಾಪರಿಗೆ ಸಿಗಬೇಕಾದ ಡಿ.ಎ ಶೀಘ್ರ ವಿತರಿಸಬೇಕು, ನೇಮಕಾತಿ ಪಡೆದ ಅಧ್ಯಾಪಕರ ಟೀಚರ್ ಅರ್ಹತೆ ಪರೀಕ್ಷೆ ರದ್ದುಗೊಳಿಸಬೇಕು, ಮುಂತಾದ ಬೇಡಿಕೆ ಮುಂದಿರಿಸಿ ಧರಣಿ ನಡೆಯಿತು. ಸಂಘಟನೆ ಜಿಲ್ಲಾಧ್ಯಕ್ಷ ಪ್ರಶಾಂತ್ ಕಾನತ್ತೂರ್ ಉದ್ಘಾಟಿಸಿದರು. ಕುಂಬಳೆ ಉಪ ಜಿಲ್ಲಾಧ್ಯಕ್ಷೆ ಜಲಜಾಕ್ಷಿ ಟೀಚರ್ ಅಧ್ಯಕ್ಷತೆ ವಹಿಸಿದರು, ಕೆಪಿಎಸ್‍ಟಿಎ ರಾಜ್ಯ ಸಮಿತಿ ಸದಸ್ಯ ಅಶೋಕ್ ಮಾಸ್ಟರ್ ಮುಖ್ಯ ಭಾಷಣ ಮಾಡಿದರು. ಗೋಪಾಲಕೃಷ್ಣ ಮಾಸ್ಟರ್, ರಾಧಾಕೃಷ್ಣ ಮಾಸ್ಟರ್, ಕೀಳಿoಗಾರ್ ಶಾಲೆಯ ಮುಖ್ಯೋಪಾಧ್ಯಾಯನಿ ವಿದ್ಯಾ ಸರಸ್ವತಿ, ಶರತ್ ಚಂದ್ರ ಶೆಟ್ಟಿ, ಮಾತನಾಡಿದರು. ಉಮೇಶ್ ಶೆಟ್ಟಿ, ಶ್ರೀಧರ ಮಾಸ್ಟರ್ ಶೇಣಿ, ಬಾಲಕೃಷ್ಣ ಮಾಸ್ಟರ್ ನೇತೃತ್ವ ನೀಡಿದರು.. ಕಾರ್ಯದರ್ಶಿ ನಿರಂಜನ ರೈ ಪೆರಡಾಲ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು, ಕೋಶಾಧಿಕಾರಿ ಮಲ್ಲಿಕಾ ಟೀಚರ್ ವಂದಿಸಿದರು.






Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries