ಮುಳ್ಳೇರಿಯ: ತ್ಯಾಜ್ಯ ಮುಕ್ತ ಕಾಸರಗೋಡಿಗಾಗಿ ಹಸಿರು ಕೇರಳ ಮಿಷನ್ ಸಹಯೋಗದಲ್ಲಿ ಮುಳ್ಳೇರಿಯ ಎಯುಪಿ ಶಾಲಾ ವಿದ್ಯಾರ್ಥಿಗಳು ಸಿದ್ಧಪಡಿಸಿದ ಪೇಪರ್ ಬ್ಯಾಗ್ ನ್ನು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಬುಧವಾರ ಬಿಡುಗಡೆಗೊಳಿಸಿದರು. ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ಸರ್ಕಾರ ಸಂಪೂರ್ಣವಾಗಿ ನಿಷೇಧಿಸಿರುವ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಆ ಸಂದೇಶವನ್ನು ತಲುಪಿಸಲು ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ.
ಶಾಲೆಯ ಸೀಡ್ ಕ್ಲಬ್ ಮತ್ತು ಇಕೋ ಕ್ಲಬ್ ಪಿಟಿಎ ಸಮಿತಿ ಮತ್ತು ಹಸಿರು ಕೇರಳ ಮಿಷನ್ ಸಹಯೋಗದಲ್ಲಿ ಸಾವಿರ ಪೇಪರ್ ಬ್ಯಾಗ್ಗಳನ್ನು ತಯಾರಿಸಲಾಗಿದೆ. ಪೇಪರ್ ಬ್ಯಾಗ್ ಮಾರಾಟದಿಂದ ಬರುವ ಹಣದಲ್ಲಿ ಪರಿಸರ ಸಂರಕ್ಷಣಾ ಚಟುವಟಿಕೆ ಹಾಗೂ ದತ್ತಿ ಚಟುವಟಿಕೆಗಳನ್ನು ಕೈಗೊಳ್ಳಲು ಯೋಜಿಸಲಾಗಿದೆ.
ಹಸಿರು ಕೇರಳ ಮಿಷನ್ ಜಿಲ್ಲಾ ಸಂಯೋಜಕ ಎಂ.ಪಿ.ಸುಬ್ರಮಣಿಯನ್ ಮತ್ತು ಜಿಲ್ಲಾ ಮಾಹಿತಿ ಅಧಿಕಾರಿ ಎಂ. ಮಧುಸೂದನನ್, ಮುಖ್ಯಶಿಕ್ಷಕ ಅಶೋಕ ಅರಳಿತ್ತಾಯ, ಪಿಟಿಎ ಅಧ್ಯಕ್ಷ ಸತೀಶ್ ಕುಮಾರ್, ಶಿಕ್ಷಕಿ ಎಂ.ಸಾವಿತ್ರಿ, ಸೀಡ್ ಕ್ಲಬ್ ಅಧ್ಯಕ್ಷ ಅಭಿಲಾಷ್ ಯಾದವ್, ಸೀಡ್ ಕ್ಲಬ್ ಕಾರ್ಯದರ್ಶಿ ಅಮಲ್ ಎಸ್.ನಾಯರ್, ಸೀಡ್ ಕ್ಲಬ್ ವರದಿಗಾರ ಅಂಜಿತ್ ಎಸ್.ನಾಯರ್ ಉಪಸ್ಥಿತರಿದ್ದರು.