HEALTH TIPS

ಕೆ.ಎಸ್.ಆರ್.ಟಿ.ಸಿ ನೌಕರರ ಪಿಂಚಣಿ; ಈ ತಿಂಗಳ 25 ರೊಳಗೆ ಪಾವತಿಸಬೇಕು; ಹೈಕೋರ್ಟ್ ಆದೇಶ


            ಎರ್ನಾಕುಳಂ: ಕೆಎಸ್‍ಆರ್‍ಟಿಸಿ ನೌಕರರ ಪಿಂಚಣಿಯನ್ನು ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳದ್ದು ಒಟ್ಟು ಸೇರಿಸಿ  25 ರೊಳಗೆ ಪಾವತಿಸಬೇಕು. ಇತರ ತಿಂಗಳ ಪಿಂಚಣಿಯನ್ನು ಮೊದಲ ವಾರದಲ್ಲಿ ಪಾವತಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಅವರು ಈ ಆದೇಶ ನೀಡಿದ್ದಾರೆ.
          ಇದಲ್ಲದೇ ಕಾಟ್ಟಕ್ಕಡದಲ್ಲಿ ಕೆಎಸ್‍ಆರ್‍ಟಿಸಿ ನಿವೃತ್ತ ನೌಕರ ಆತ್ಮಹತ್ಯೆಗೆ ಕೋರ್ಟ್ ಶೋಕ ವ್ಯಕ್ತಪಡಿಸಿದೆ. ಘಟನೆಗೆ ಸಂಬಂಧಿಸಿದಂತೆ ಕೆಎಸ್‍ಆರ್‍ಟಿಸಿಯಿಂದಲೂ ಮಾಹಿತಿ ಕೇಳಲಾಗಿದೆ.
           ಸಹಕಾರಿ ಬ್ಯಾಂಕ್‍ಗಳೊಂದಿಗೆ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಲು ವಿಳಂಬವಾಗುತ್ತಿರುವುದೇ ಪಿಂಚಣಿ ಸಮಸ್ಯೆಗೆ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರತಿ ಆರು ತಿಂಗಳಿಗೊಮ್ಮೆ ಎಂಒಯುಗಳಿಗೆ ಸಹಿ ಹಾಕಲಾಗುತ್ತದೆ.
           ಕೆಎಸ್‍ಆರ್‍ಟಿಸಿ ಇತಿಹಾಸದಲ್ಲೇ ಪಿಂಚಣಿದಾರರು ದೊಡ್ಡ ಪಿಂಚಣಿ ಸಂಕಷ್ಟದಲ್ಲಿದ್ದಾರೆ. ಪಿಂಚಣಿ ಸ್ಥಗಿತಗೊಂಡಿದ್ದರಿಂದ ಜೀವನದಲ್ಲಿ ಸಂಕಷ್ಟಕ್ಕೆ ಸಿಲುಕಿ ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 75 ರಷ್ಟು ಪಿಂಚಣಿದಾರರು ಕೇವಲ ಪಿಂಚಣಿಯನ್ನಷ್ಟೇ  ಅವಲಂಬಿಸಿದ್ದಾರೆ. ಸದ್ಯ ಈ ಜನರು ಸ್ವಂತ ಚಿಕಿತ್ಸೆಗೂ ಹಣವಿಲ್ಲದೆ ಪರದಾಡುತ್ತಿದ್ದಾರೆ. ಪಿಂಚಣಿ ಪಡೆಯಲು ವಿಳಂಬಗೊಂಡು ಹಸಿವಿನಿಂದ ಸಾವಿಗೀಡಾಗಿದ್ದರೂ ಸರಕಾರದಿಂದ ಇದುವರೆಗೂ ಯಾವುದೇ ಅನುಕೂಲಕರ ನಿರ್ಧಾರವಾಗಿಲ್ಲ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries