HEALTH TIPS

4.33 ಕೋಟಿ ಅಸಮರ್ಪಕ ಬಳಕೆ: ಹಣಕಾಸು ಇಲಾಖೆಯ ಆಕ್ಷೇಪ ಹೊರತಾಗಿ ಮುಖ್ಯಮಂತ್ರಿಯಿಂದ ಬೆಹ್ರಾ ಗೆ ಕ್ಲೀನ್ ಚಿಟ್


              ತಿರುವನಂತಪುರ: ಪೋಲೀಸ್ ಸಿಬ್ಬಂದಿ ಕ್ವಾರ್ಟರ್ಸ್ ನಿರ್ಮಿಸಲು ಅನುಮತಿ ನೀಡಿದ 4.33 ಕೋಟಿ ರೂ.ವನ್ನು ಬೇರೆಡೆಗೆ ಬಳಸಿದ  ಮಾಜಿ ಡಿಜಿಪಿ ಲೋಕನಾಥ್ ಬೆಹ್ರಾ ಅವರಿಗೆ ಕ್ಲೀನ್ ಚಿಟ್ ನೀಡಿದ್ದಕ್ಕೆ ಹಣಕಾಸು ಇಲಾಖೆಯಲ್ಲಿ ವಿರೋಧ ವ್ಯಕ್ತವಾಗಿದೆ.
          ಆದರೆ ಈ ಆಕ್ಷೇಪವನ್ನು ಮೆಟ್ಟಿನಿಂತು ಬೆಹ್ರಾ ಅವರ ಕ್ರಮಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
          ಬೆಹ್ರಾ ವಿರುದ್ಧ ಹಣಕಾಸು ಇಲಾಖೆ ಕ್ರಮಕ್ಕೆ ಆಗ್ರಹಿಸಿತ್ತು. ಕ್ರಿಯಾ ಯೋಜನೆಗಿಂತ ಭಿನ್ನವಾಗಿ, ಅನುಮೋದನೆಯಿಲ್ಲದೆ ಹಣವನ್ನು ಬೇರೆಡೆ ಬಳಸುವುದನ್ನು  ಸಮರ್ಥಿಸಲಾಗುವುದಿಲ್ಲ. ಬೆಹ್ರಾ ಮಾಡಿರುವುದು ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಕೇಂದ್ರ ಸರ್ಕಾರದಿಂದ ಬರಬೇಕಾದ ಹಣವನ್ನೂ ಕಳೆದುಕೊಂಡಿದೆ ಎಂಬ ಆರೋಪ ಕೇಳಿಬಂದಿತ್ತು.
           ಮಾಜಿ ಪೋಲೀಸ್ ಮುಖ್ಯಸ್ಥರ ವಿರುದ್ಧ ಕಠಿಣ ಶಿಸ್ತು ಕ್ರಮವನ್ನು ಉಲ್ಲೇಖಿಸಿ ಹಣಕಾಸು ಇಲಾಖೆ ಕಡತವನ್ನು ಹಿಂದಿರುಗಿಸಿತ್ತು. ಆದರೆ ಈ ಆಕ್ಷೇಪವನ್ನು ಮೆಟ್ಟಿ ನಿಂತು ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಬೆಹ್ರಾ ಅವರಿಗೆ ಕ್ಲೀನ್ ಚಿಟ್ ನೀಡಿತು.
           ಬೆಹ್ರಾ ಅವರ ವಿವಾದಾತ್ಮಕ ಕ್ರಮ ಮೊದಲ ಪಿಣರಾಯಿ ಸರ್ಕಾರದ ಅವಧಿಯಲ್ಲಾಗಿತ್ತು. ಪೋಲೀಸ್ ವರಿμÁ್ಠಧಿಕಾರಿಗಳ ಶಿಬಿರ ಕಚೇರಿ, ಹಿರಿಯ ಪೋಲೀಸ್ ಅಧಿಕಾರಿಗಳಿಗೆ ಎರಡು ವಿಲ್ಲಾಗಳು ಮತ್ತು ಪೂರಕ ಕಚೇರಿಗಳನ್ನು ನಿರ್ಮಿಸಲು ನೀಡಲಾದ ಹಣವನ್ನು ಬೇರೆಡೆಗೆ ಬಳಸಲಾಗಿತ್ತು.  ಸಿಐಜಿ ಇದನ್ನು ಸೂಚಿಸಿದಾಗ ಟೀಕೆ ತೀವ್ರಗೊಂಡಿತ್ತು. ಆದರೂ ಸರ್ಕಾರ, ಸಚಿವ ಸಂಪುಟದ ಬೆಂಬಲ ಅಚ್ಚರಿ ಮೂಡಿಸಿದೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries