ಬದಿಯಡ್ಕ: ಗಡಿನಾಡ ಕನ್ನಡ ಸಾಹಿತ್ಯ, ಶಿಕ್ಷಣ, ಭಾμÁ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ಪ್ರಸ್ತುತ ವಿದ್ಯಾಮಾನಗಳ ಬದ್ಧತೆ ಕುರಿತು ಆ.7ಕ್ಕೆ ಬದಿಯಡ್ಕದ ಸೀತಾರಾಮ್ ಬಿಲ್ಡಿಂಗ್ ನಲ್ಲಿ ಮುಕ್ತ ಸಂವಾದ ಜರಗಲಿದೆ.
ಪ್ರಚಲಿತ ವಿಷಯಗಳ ವೈಭವಿಕರಣ, ಗಡಿನಾಡ ಶಿಕ್ಷಣ, ಭಾμÁ ಬಳಕೆಯ ಬಗೆಗೆ ಕನ್ನಡಿಗರ ಆತಂಕ ಮೊದಲಾದವುಗಳ ಬಗ್ಗೆ ಜಾಗೃತಿ ಮೂಡಿಸಲು ಸಮಾನಾಸಕ್ತರು ಬದಿಯಡ್ಕ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ಬೆಳಿಗ್ಗೆ 10 ಗಂಟೆಗೆ ಆರಂಭವಾಗುವ ಮುಕ್ತ ಸಂವಾದದಲ್ಲಿ ಶಿಕ್ಷಣ,ಸಾಹಿತ್ಯ,ಮಾಧ್ಯಮ ರಂಗದ ಅನುಭವಿಗಳು, ವಿವಿಧ ಕಾಲೇಜು,ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದ್ದು ಸಂವಾದ ಚರ್ಚೆಯಲ್ಲಿ ಮುಕ್ತವಾಗಿ ಪಾಲ್ಗೊಂಡು ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಅವಕಾಶ ಇದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.
ಅ.7ಕ್ಕೆ ಬದಿಯಡ್ಕದಲ್ಲಿ ಪ್ರಚಲಿತ ವಿಷಯ-ವಿಚಾರಗಳ ಬಗ್ಗೆ ಮುಕ್ತ ಸಂವಾದ
0
August 06, 2022
Tags