HEALTH TIPS

ಕಾಡಾನೆಗಳ ಹಾವಳಿಗೆ ಪರಿಹಾರ, ಕಾರಡ್ಕ ಆನೆ ಪ್ರತಿರೋಧ ಪದ್ಧತಿಗೆ ಚಾಲನೆ: ಪ್ರಥಮ ಹಂತದ ಚಾಜಿರ್ಂಗ್ ಆಗಸ್ಟ್ 8ರಂದು


         ಕಾಸರಗೋಡು: ಕಾಡಾನೆಗಳ ಹಾವಳಿಯನ್ನು ನಿಯಂತ್ರಿಸಲು ಕಾರಡ್ಕ ಬ್ಲಾಕ್ ಪಂಚಾಯತ್ ಆರಂಭಿಸಿದ ಆನೆ ಗೋಡೆ ಪದ್ಧತಿಯ ಪ್ರಥಮ ಹಂತದ ಕಾರ್ಯಗಳು ಆರಂಭಗೊಂಡಿದೆ. ಈಗಾಗಲೇ ಪೂರ್ಣಗೊಂಡಿರುವ ಎರಡುವರೆ ಕಿಲೋ ಮೀಟರ್ ಆನೆ ತಡೆಗೋಡೆಯ ಚಾಜಿರ್ಂಗ್ ಸೋಮವಾರ (ಆಗಸ್ಟ್ 8) ರಂದು ಬೆಳಗ್ಗೆ 11ಗಂಟೆಗೆ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ಉದ್ಘಾಟಿಸುವರು.
          ದೇಲಂಪಾಡಿ ಪಂಚಾಯತಿನ ಬಳ್ಳಕ್ಕಾನದಿಂದ ಒಲಿಯಕೊಚ್ಚಿವರೆಗೆ ಎರಡುವರೆ ಕಿಲೋ ಮೀಟರ್ ಉದ್ದದ ಬೇಲಿ ಕಾರ್ಯನಿವ9ಹಿಸಲಿರುವುದು. ತದನಂತರ ಆಗಸ್ಟ್ 15 ರೊಳಗೆ ಬಾಕಿ ಉಳಿದ 4 ಕಿಲೋ ಮೀಟರ್ ಬೇಲಿಯನ್ನು ಪೂರ್ತಿಗೊಲಿಸಿದರೆ ಈಗ ಇರುವ ಕಾಡಾನೆಗಳ ಹಾವಳಿಯಿಂದ ಮುಕ್ತರಾಗಬಹುದು ಎಂದು ಬ್ಲಾಕ್ ಪಂಚಾಯತ್ ಅಧ್ಯಕ್ಷ ಸಿಜಿ ಮಾಥ್ಯೂ, ಡಿವಿಷನಲ್ ಫಾರೆಸ್ಟ್ ಆಫೀಸರ್ ಪಿ ಬಿಜು ಎಂಬಿವರು ತಿಳಿಸಿದ್ದಾರೆ.



         ಈ ಯೋಜನೆಯು ಕಾರಡ್ಕ ಬ್ಲಾಕ್ ಪಂಚಾಯತ್ ನ ನೇತೃತ್ವದಲ್ಲಿರುವ ದೇಲಂಪಾಡಿ ಕಾರಡ್ಕ, ಮುಳಿಯಾರ್, ಬೇಡಡ್ಕ ,ಕುತ್ತಿಕ್ಕೋಲ್ ಎಂಬೀ ಪಂಚಾಯತ್ ಗಳ ಹಾಗೂ ಜಿಲ್ಲಾ ಪಂಚಾಯತ್ ನ ಸಹಾಯದಿಂದ ಅರಣ್ಯ ಇಲಾಖೆಯ ಜೊತೆಗೆ ಸೇರಿ ನಡೆಸುವ ಮಾದರಿ ಯೋಜನೆಯಾಗಿದೆ. ಕರ್ನಾಟಕದೊಂದಿಗೆ ಗಡಿಯನ್ನು ಹೊಂದಿರುವ ದೇಲಂಪಾಡಿ, ಕುತ್ತಿಕ್ಕೋಲ್ ಪಂಚಾಯತ್ ಗಳ ಗಡಿಗಳಲ್ಲಿ 29 ಕಿಲೋ ಮೀಟರ್ ಉದ್ದದ ಸೌರ ಶಕ್ತಿ ಬೇಲಿಯನ್ನು ನಿರ್ಮಿಸಲಾಗುವುದು. ಪ್ರಥಮ ಹಂತದಲ್ಲಿ 8 ಕಿಲೋ ಮೀಟರ್ ಬೇಲಿ ನಿರ್ಮಿಸಲು ತೀರ್ಮಾನಿಸಲಾಗಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries