ಕಾಸರಗೋಡು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವೈಭವ್ ಸಕ್ಸೇನಾ ನೇತೃತ್ವದ ವಿಶೇಷ ಪೊಲೀಸರ ತಂಡ ನಡೆಯುತ್ತಿರುವ 'ಆಪರೇಷನ್ ಕ್ಲೀನ್ ಕಾಸರಗೋಡು' ಅನ್ವಯ ನಡೆದ ಮಿಂಚಿನ ದಾಳಿಯಲ್ಲಿ ಗಾಂಜಾ ಮತ್ತು ಎಂಡಿಎಂಎ ವಶಪಡಿಸಿಕೊಮಡು. ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕಾರಿನಲ್ಲಿ ಮಾರಕ ಮಾದಕದ್ರವ್ಯವನ್ನು ಕಾಸರಗೋಡಿನಿಂದ ಕಣ್ಣೂರಿಗೆ ಸಾಗಿಸುತ್ತಿದ್ದ ಸಂದರ್ಭ ನೀಲೇಶ್ವರ ಪಳ್ಳಿಕೆರೆ ರೈಲ್ವೇ ಗೇಟ್ ಬಳಿ ಕಾರ್ಯಾಚರಣೆ ನಡೆಸಲಾಗಿದೆ.
ಆರೋಪಿಗಳಿಂದ 25 ಗ್ರಾಂ ಎಂಡಿಎಂಎ ಹಾಗೂ 2 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಾದ ಕಣ್ಣೂರು ಮಾಡಾಯಿ ನಿವಾಸಿ ನಿಜಾಮ್ (32) ಹಾಗೂ ಕಣ್ಣೂರು ತೊಟ್ಟಡ ನಿವಾಸಿ ಮುಹಮ್ಮದ್ ತಾಹ (20)ಬಂಧಿತರು. ಆರೋಪಿಗಳು ಎಂಡಿಎಂಎ ಹಾಗೂ ಗಾಂಜಾ ಸಾಗಾಟಕ್ಕೆ ಬಳಸಿದ್ದ ಇನ್ನೋವಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಕಾಞಂಗಾಡ್ ಡಿವೈಎಸ್ಪಿ ಬಾಲಕೃಷ್ಣನ್ ನಾಯರ್ ಅವರು ಆರೋಪಿಗಳನ್ನು ಬಂಧಿಸಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 10.51ಗ್ರಾಂ ಎಂಡಿಎಂಎ ವಶಪಡಿಸಿಕೊಂಡ ಅಬಕಾರಿ ದಳ ಸಿಬ್ಬಂದಿ ಇಬ್ಬರನ್ನು ಬಂಧಿಸಿದ್ದಾರೆ. ಕಣ್ಣೂರು ಚಿರಕ್ಕಲ್ ನಿವಾಸಿ ರಹೀಂ ಮತ್ತು ಕಣ್ಣೂರು ಮರಕ್ಕಲ್ಚಿರ ನಿವಾಸಿ ಬಶೀರ್ ಎಂಬವರನ್ನು ಬಂಧಿಸಿದ್ದಾರೆ. ಬದಿಯಡ್ಕ ಸನಿಹದ ಕನ್ಯಪ್ಪಾಡಿಯಲ್ಲಿ ಅಬಕಾರಿ ರೇಂಜ್ ಇನ್ಸ್ಪೆಕ್ಟರ್ ವಿನು ಎಚ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ಆರೋಪಿ ಬಂಧನ:
ಎಂಡಿಎಂಎ ಸಾಗಾಟ ಪ್ರಕರಣದಲ್ಲಿ ಆರೋಪಿಯಾಗಿದ್ದು, ತಲೆಮರೆಸಿಕೊಂಡಿದ್ದ ಉಪ್ಪಳ ಕುರ್ಚಿಪಳ್ಳ ನಿವಾಸಿ ಅಹಮ್ಮದ್ ಎಂಬಾತನನ್ನು ಮಂಜೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ. 2011 ಆ, 26ರಂದು ಉಪ್ಪಳ ರೈಲ್ವೆ ಗೇಟ್ ಸನಿಹ ಕಾರಿನಲ್ಲಿ ಎಂಡಿಎಂಎ ಸಾಗಾಟ ಪ್ರಕರಣದಲ್ಲಿ ಆರೋಪಿಯಾಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
'ಆಪರೇಷನ್ ಕ್ಲೀನ್ ಕಾಸರಗೋಡು' ಮಾರಕ ಎಂಡಿಎಂಎ, ಗಾಂಜಾ ಆರೋಪಿಗಳ ಬಂಧನ, ವಾಹನ ವಶಕ್ಕೆ
0
August 06, 2022
Tags