ಪೆರ್ಲ: ಕಳೆದೆರಡು ದಿನಗಳಿಂದ ರಾತ್ರಿ ಸುರಿದ ಮೇಘಸ್ಪೋಟ ಮಾದರಿ ಮಳೆಗೆ ಶೇಣಿ ಸಮೀಪದ ಉಪ್ಪಳಿಗೆ ಎಂಬಲ್ಲಿ ಬಾವಿಯೊಂದು ಕುಸಿದಿದ್ದು ಈ ಸ್ಥಳದಲ್ಲಿ ನೀರು ಧಿಡೀರನೆ ಹರಿದ ಕಾರಣ ಕೃಷಿಗಳು ನಾಶಗೊಂಡಿರುವ ಬಗ್ಗೆ ವರದಿಯಾಗಿದೆ.
ಇಲ್ಲಿನ ರಘರಾಮ ಬೋರ್ಕರ್ ಎಂಬವರ ಕೃಷಿ ಸ್ಥಳದ ಬಾವಿಯ ಕಟ್ಟೆ ಮಣ್ಣಿನೊಳಗೆ ಕುಸಿದು ಹೋಗಿದೆ. ಕಳೆದ ಬಾರಿ ಮಣ್ಣು ಸಮ ತಟ್ಟು ಮಾಡಿದ ಸ್ಥಳದಲ್ಲಿ ಇದೀಗ ಸುರಿದ ಮಳೆಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದು ಅಡಿಕೆ ಗಿಡಗಳು ನಾಶಗೊಂಡಿರುವುದಾಗಿ ತಿಳಿಸಿದ್ದಾರೆ.