ತಿರುವನಂತಪುರ: ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅವರು ಕಣ್ಣೂರಿನ ಉಪಕುಲಪತಿ ಡಾ.ಗೋಪಿನಾಥ್ ರವೀಂದ್ರನ್ ಅವರಿಂದ ವಿವರಣೆ ಕೇಳಿದ್ದಾರೆ.
ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಕೆ.ಕೆ.ರಾಗೇಶ್ ಅವರ ಪತ್ನಿ ಪ್ರಿಯಾ ವರ್ಗೀಸ್ ಅವರನ್ನು ಸಹ ಪ್ರಾಧ್ಯಾಪಕರನ್ನಾಗಿ ನೇಮಿಸಿರುವ ಕುರಿತು ವಿವರಣೆ ಕೇಳಲಾಗಿದೆ. ಅಕ್ರಮ ನೇಮಕಾತಿ ರದ್ದುಪಡಿಸುವಂತೆ ದೂರಿನ ಮೇರೆಗೆ ರಾಜ್ಯಪಾಲರು ಈ ಕ್ರಮಕ್ಕೆ ಮುಂದಾಗಿದ್ದಾರೆ.
ಯುಜಿಸಿ ನಿಯಮಗಳ ಪ್ರಕಾರ ಪ್ರಿಯಾ ವರ್ಗೀಸ್ ಅವರಿಗೆ ಎಂಟು ವರ್ಷಗಳ ಬೋಧನಾ ಅನುಭವವಿಲ್ಲ. ಕಣ್ಣೂರು ವಿಶ್ವವಿದ್ಯಾನಿಲಯದಲ್ಲಿ ಮಲಯಾಳಂ ಅಸೋಸಿಯೇಟ್ ಪ್ರ್ರೊಫೆಸರ್ ಹುದ್ದೆಗೆ ಪ್ರಥಮ ಯಾರ್ಂಕ್ ನೀಡಲಾಗಿದೆ ಎಂಬ ದೂರಿನ ಕುರಿತು ರಾಜ್ಯಪಾಲರು ಗೋಪಿನಾಥ್ ರವೀಂದ್ರನ್ ಅವರಿಂದ ತುರ್ತು ವಿವರಣೆ ನೀಡುವಂತೆ ಒತ್ತಾಯಿಸಿದರು.
ತ್ರಿಶೂರ್ ಕೇರಳ ವರ್ಮಾ ಕಾಲೇಜಿನಲ್ಲಿ ಶಿಕ್ಷಕಿಯಾಗಿರುವ ಪ್ರಿಯಾ ವರ್ಗೀಸ್ ಅವರನ್ನು ಕಳೆದ ನವೆಂಬರ್ನಲ್ಲಿ (ವಿಸಿ ಅಧಿಕಾರಾವಧಿ ವಿಸ್ತರಿಸುವ ಮುನ್ನ) ಸಂದರ್ಶನ ನಡೆಸಿದ್ದು ವಿವಾದವಾಗಿತ್ತು. ಯುಜಿಸಿ ನಿಬಂಧನೆಗಳ ಅಡಿಯಲ್ಲಿ ಸಂಶೋಧನಾ ಅಧ್ಯಯನಕ್ಕೆ ಖರ್ಚು ಮಾಡಿದ ಮೂರು ವರ್ಷಗಳ ಅವಧಿಯನ್ನು ನೇರ ನೇಮಕಾತಿಗಾಗಿ ಬೋಧನಾ ಅನುಭವವೆಂದು ಪರಿಗಣಿಸಬಾರದು, ಈ ಅಧ್ಯಯನದ ಅವಧಿಯನ್ನು ಕೂಡಾ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಆಗ ಹಿಂದಿನ ಅನುಭವ ಇರುವ ಹಲವರನ್ನು ತಿರಸ್ಕರಿಸಿ ಪ್ರಿಯಾ ಅವರನ್ನು ನೇಮಿಸಲಾಗಿತ್ತು.
ಈ ಹಿಂದೆ ಕಣ್ಣೂರು ವಿಶ್ವವಿದ್ಯಾನಿಲಯದಲ್ಲಿ ಅಸಿಸ್ಟೆಂಟ್ ಪ್ರ್ರೊಫೆಸರ್ ಹುದ್ದೆಗೆ ನೇಮಕಾತಿಗೆ ಪ್ರಯತ್ನಿಸಿದರೂ ವಯಸ್ಸಾದ ಕಾರಣ ಫಲಕಾರಿಯಾಗಿರಲಿಲ್ಲ. ನಂತರ ತರಾತುರಿಯಲ್ಲಿ ಸಹಪ್ರಾಧ್ಯಾಪಕ ಹುದ್ದೆ ಘೋಷಣೆ ಮಾಡಿ ಸಂದರ್ಶನ ನಡೆಸಿ ಪ್ರಥಮ ರ್ಯಾ ಂಕ್ ನೀಡಲಾಗಿದೆ. ಯುಜಿಸಿ ನಿಯಮಾವಳಿಯನ್ನು ಸಂಪೂರ್ಣವಾಗಿ ಕಡೆಗಣಿಸಿ ಪ್ರಿಯಾ ವರ್ಗೀಸ್ ನೇಮಕವನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ವಿಶ್ವವಿದ್ಯಾಲಯ ಉಳಿಸಿ ಅಭಿಯಾನ ಸಮಿತಿ ರಾಜ್ಯಪಾಲರಿಗೆ ಮನವಿ ಪತ್ರವನ್ನೂ ಸಲ್ಲಿಸಿತ್ತು.
ಮುಖ್ಯಮಂತ್ರಿ ಆಪ್ತ ಕಾರ್ಯದರ್ಶಿ ಪತ್ನಿ ಅಕ್ರಮ ನೇಮಕಾತಿ; ಕಣ್ಣೂರು ವಿ.ವಿ. ಉಪಕುಲಪತಿಯಿಂದ ವಿವರಣೆ ಕೇಳಿದ ರಾಜ್ಯಪಾಲರು
0
August 06, 2022
Tags