HEALTH TIPS

ನದಿಯಲ್ಲಿ ಸಿಲುಕಿದ ಆನೆ ಸ್ವಯಂ ರಕ್ಷಣೆ: ಗಂಭೀರ ಗಾಯವಾಗಿರುವ ಶಂಕೆ

                      ತ್ರಿಶೂರ್: ನದಿಯಲ್ಲಿ ಗಂಟೆಗಟ್ಟಲೆ ಸಿಲುಕಿ ಕೊನೆಗೂ ಪಾರಾದ ಆನೆಗೆ ಗಂಭೀರವಾಗಿ ಗಾಯಗೊಂಡಿದೆ ಎಂದು ಊಹಿಸಲಾಗಿದೆ. ಮಂಗಳವಾರ ರಾತ್ರಿ ಈ ಪ್ರದೇಶದಿಂದ ಆನೆಯ ಕೂಗು ಕೇಳಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
       ಕಾಡೊಳಗೆ ತಂಡದಿದ ತಪ್ಪಿಸಿಕೊಂಡ ಆನೆಯ ಕೂಗು ಎಂದು ಶಂಕಿಸಲಾಗಿದೆ. ಬೆಳಗಿನ ಜಾವದವರೆಗೂ ಆನೆಯ ಕೂಗು ಕೇಳಿಸಿತ್ತು ಎನ್ನುತ್ತಾರೆ ಸ್ಥಳೀಯರು.
        ಅತಿರಪ್ಪಳ್ಳಿ ಜಲಪಾತದ ಮೇಲಿನ ಕಾಡಿನಿಂದ ಕೂಗು ಕೇಳಿಸಿತು. ಬೆಳಗಿನ ಜಾವದವರೆಗೆ ಕೇಳಿಬರುವ ದೀರ್ಘ ಘೀಳಿಡುವ ಧ್ವನಿ ಆನೆಗೆ ತೀವ್ರ ಸ್ವರೂಪದ ಗಾಯ  ಆಗಿರಬಹುದು ಎಂದು ಸ್ಥಳೀಯರು ಹೇಳಿದ್ದಾರೆ. ರಕ್ಷಿಸಿದ ಆನೆಯ ದೇಹದಾದ್ಯಂತ ಗಾಯಗಳಾಗಿತ್ತು.
         ಅತಿರಪ್ಪಳ್ಳಿ - ಪಿಳ್ಳಪ್ಪಾರ ಎಂಬಲ್ಲಿ ಮಂಗಳವಾರ ಬೆಳಗ್ಗೆ ಕಾಡಾನೆ ಕೊಚ್ಚಿ ಹೋಗಿದೆ. ಬೆಳಿಗ್ಗೆ ಆರು ಗಂಟೆಗೆ ಸ್ಥಳೀಯರು ನದಿಯಲ್ಲಿ ಕಾಡಾನೆಯನ್ನು ಕಂಡರು.  ಭಾರೀ ಮಳೆಯ ನಂತರ ಪೆರಿಂಗಲಕುತ್ ಅಣೆಕಟ್ಟು ತೆರೆದಿರುವುದರಿಂದ ನದಿಯಲ್ಲಿ ನೀರಿನ ಹರಿವು ಜೋರಾಗಿತ್ತು. ನಂತರ ಕಾಡಾನೆ ನದಿಯ ಮಧ್ಯದಲ್ಲಿ ಹಲವಾರು ಗಂಟೆಗಳ ಕಾಲ ನಿಂತಿತ್ತು. ಬಲವಾದ ಪ್ರವಾಹವು ರಕ್ಷಣೆಯನ್ನು ಕಷ್ಟಕರವಾಗಿಸಿತು. ಹೀಗಾಗಿ ಆನೆಯೇ ಈಜಿಕೊಂಡು ತಪ್ಪಿಸಿಕೊಳ್ಳಲು ಯತ್ನಿಸಿದೆ. ಈ ನಡುವೆ ಆನೆ ಕಲ್ಲು ಹಾಗೂ ಇನ್ನಿತರ ವಸ್ತುಗಳಿಗೆ ಬಡಿದು ಗಾಯಗೊಂಡಿದೆ. ಕೊನೆಗೆ ಮಧ್ಯಾಹ್ನ ಆನೆ ತಪ್ಪಿಸಿಕೊಂಡು ಕಾಡಿನತ್ತ ತೆರಳಿದೆ ಎನ್ನಲಾಗಿದೆ.
         ಭಾರೀ ಮಳೆ ಹಾಗೂ ನದಿಯ ರಭಸಕ್ಕೆ ಸಿಲುಕಿದ ಆನೆ ಗಂಟೆಗಟ್ಟಲೆ ಸಾವು-ಬದುಕಿನ ನಡುವೆ ಹೋರಾಟ ನಡೆಸಿತು. ಇದೇ ವೇಳೆ ಕಾಡಿಗೆ ಹೋದ ಆನೆ ಏನಾಯಿತು ಎಂಬುದು ಸ್ಪಷ್ಟವಾಗಿಲ್ಲ. ಸಾಂದ್ರತೆಯಿಂದಾಗಿ ಡ್ರೋನ್‍ನಿಂದ ತಪಾಸಣೆ ಕೂಡ ಅಪ್ರಾಯೋಗಿಕವಾಗಿದೆ. ಅರಣ್ಯ ಇಲಾಖೆ ವಾಚರ್‍ಗಳು ಪರಿಶೀಲನೆ ಆರಂಭಿಸಿದ್ದಾರೆ ಎಂದು ಡಿಎಫ್‍ಒ ಮಾಹಿತಿ ನೀಡಿದರು. ಆನೆ ಉಳಿಸಲು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries