HEALTH TIPS

ರಾಜಕೀಯ ಜೀವನದಲ್ಲಿ ಸ್ವಚಾರಿತ್ಮವನ್ನು ಮೈ ಗೂದಡಿಸಿಗೊಂಡ ನಾಯಕಿ ಸುಷ್ಮಾಸ್ವರಾಜ್: ಕೊಳಾರ್ ಸತೀಶ್ಚಂದ್ರ ಭಂಡಾರಿ


               ಕುಂಬಳೆ: ಸಮಾಜವಾದಿ ಪಕ್ಷದಿಂದ  ಭಾರತೀಯ  ಜನತಾ ಪಕ್ಷಕ್ಕೆ  ಆಗಮಿಸಿ  ಭಾರತೀಯ ಜನತಾ ಪಕ್ಷದ ತತ್ವ ಸಿದ್ದಾಂತಗಳಿಗೆ ಕಟಿಬದ್ದವಾಗಿ ದುಡಿದ ಮಹಾನ್ ಚೇತನ ಸುಷ್ಮ ಸ್ವರಾಜ್ 23 ನೇ ವಯಸ್ಸಿನಲ್ಲಿ ಶಾಸಕಿಯಗಿ ಹರ್ಯಾಣ ವಿಧಾನಸಬೆಯನ್ನು ಪ್ರವೇಶಿಸಿದ ಅವರು ಜೀವನಪಯರ್ಂತ  ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ದೆಹಲಿಯ  ಮುಖ್ಯ ಮಂತ್ರಿಗಳಾಗಿ ಕೇಂದ್ರ ವಿದೇಶಾಂಗ ಸಚಿವೆಯಾಗಿ ದೇಶಕ್ಕೆ ಉತ್ತಮ ಸೇವೆಯನ್ನು ಸಲ್ಲಿಸಿದ್ದಾರೆ. ಕರ್ನಾಟಕದ  ಬಳ್ಳಾರಿಯಲ್ಲಿ ವರಮಹಾಲಕ್ಷ್ಮಿ ಪೂಜೆಯಲ್ಲಿ ಭಾಗವಹಿಸಿ ಬಳ್ಳಾರಿಯಲ್ಲಿ ಬಿಜೆಪಿಯ ಚೈತ್ರ ಯಾತ್ರೆಗೆ ಕಾರಣರಾದವರು ಎಂದು ಬಿಜೆಪಿ ಉತ್ತರ ವಲಯ ಮುಖಂಡ ಕೋಳಾರು ಸತೀಶ್ಚಂದ್ರ ಭಂಡಾರಿ ಹೇಳಿದರು.
                ಭಾರತೀಯ ಜನತಾ ಪಕ್ಷ  ಕುಂಬಳೆ ಮಂಡಲ  ಸಮಿತಿ  ಆಶ್ರಯದಲ್ಲಿ ನಡೆದ  ಸುಷ್ಮಸ್ವರಾಜ್ ಸಂಸ್ಮಾರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
                ಬಿಜೆಪಿ ಮಂಡಲ ಉಪಾಧ್ಯಕ್ಷೆ ಪ್ರೇಮಲತಾ ಎಸ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿಯ ಹಿರಿಯ ನೇತಾರ ವಿ ರವೀಂದ್ರನ್,  ಜಿಲ್ಲಾ ಸಮಿತಿ ಸದಸ್ಯ ಮುರಳಿಧರ ಯಾದವ್ ನಾಯ್ಕಾಪು, ಬಿಜೆಪಿ ಕುಂಬಳೆ ದಕ್ಷಿಣ ವಲಯ ಅಧ್ಯಕ್ಷ ಸುಜಿತ್ ರೈ,  ಮಂಡಲ ಉಪಾದ್ಯಕ್ಷ ರಮೇಶ್ ಭಟ್, ಮಂಡಲ ಕಚೇರಿ  ಕಾರ್ಯದರ್ಶಿ ಶಶಿ ಕುಂಬಳೆ, ಜನಪ್ರತಿನಿಧಿಗಳಾದ  ಸುಲೋಚನ, ವಿವೇಕಾನಂದ ಶೆಟ್ಟಿ, ಮೋಹನ್ ಕೆ, ಗೋಪಾಲಕೃಷ್ಣ ಕಂಚಿಕಟ್ಟೆ, ಜಗದೀಶ್ ಪೇರಾಲ್ ಉಪಸ್ಥಿತರಿದ್ದರು. ಪಕ್ಷದ ಪಂಚಾಯತಿ ಘಟಕದ ಪ್ರಧಾನ ಕಾರ್ಯದರ್ಶಿ ಜಿತೇಶ್ ಸ್ವಾಗತಿಸಿ, ಪ್ರೆಮಾವತಿ  ವಂದಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries