ಕಾಸರಗೋಡು: ಜಿಲ್ಲೆಯಲ್ಲಿ ಮೃತಪಟ್ಟಿರುವ ವ್ಯಕ್ತಿಗಳ ಹೆಸರಲ್ಲಿ ಸಾಮಾಜಿಕ ಸುರಕ್ಷಾ ಪಿಂಚಣಿಯ ಲಕ್ಷಾಂತರ ರೂ. ಮೊತ್ತವನ್ನು ಅವರ ಆಶ್ರಿತರು ಪಡೆದುಕೊಂಡಿರುವುದನ್ನು ರಾಜ್ಯ ಲೋಕಲ್ ಫಂಡ್ ಆಡಿಟ್ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.
ಕಾಸರಗೋಡು ಜಿಲ್ಲೆಯ 15 ಗ್ರಾಮ ಪಂಚಾಯಿತಿಗಳಲ್ಲಿ ಮೃತಪಟ್ಟ ಫಲಾನುಭವಿಗಳ ಹೆಸರಲ್ಲೂ ಪಿಂಚಣಿ ವಿತರಿಸಿರುವುದನ್ನು ಆಡಿಟಿಂಗ್ ವಿಭಾಗ ಪತ್ತೆಹಚ್ಚಿದೆ. ಪೈವಳಿಕೆ, ಮಂಗಲ್ಪಾಡಿ, ಪುತ್ತಿಗೆ, ಕಾರಡ್ಕ, ಮಧೂರು, ಪಳ್ಳಿಕೆರೆ, ಮೊಗ್ರಾಲ್ಪುತ್ತೂರ್, ಚೆಂಗಳ ಸೇರಿದಂತೆ ಜಿಲ್ಲೆಯ 15 ಪಂಚಾಯಿತಿಗಳಲ್ಲಿ ಈ ಲೋಪ ಪತ್ತೆಹಚ್ಚಲಾಗಿದೆ. ಪೈವಳಿಕೆ ಪಂಚಾಯಿತಿಯ 62ಮಂದಿ 6.37 ಲಕ್ಷ ರೂ., ಪುತ್ತಿಗೆ ಪಂಚಾಯಿತಿಯ 13ಮಂದಿ 2.18ಲಕ್ಷ ರೂ, ಮಂಗಲ್ಪಾಡಿ ಪಂಚಾಯಿತಿಯಲ್ಲಿ ಒಬ್ಬರ ಹೆಸರಲ್ಲಿ 30160 ರೂ, ಕಾರಡ್ಕದ 26ಮಂದಿಯ 4.36ಲಕ್ಷ ರೂ, ಮಧೂರು ಪಂಚಾಯಿತಿಯ 8ಮಂದಿ 1.68ಲಕ್ಷ ರೂ, ಚೆಂಗಳ ಪಂಚಾಯಿತಿಯ 20ಮಂದಿ 77300 ರೂ, ಪಳ್ಳಿಕೆರೆಯ 37ಮಂದಿ 3.60ಲಕ್ಷ ರೂ. ಪಡೆಯಲಾಗಿದೆ. 2019ರಿಂದ 2021ರ ಕಾಲಾವಧಿಯಲ್ಲಿ ಈ ಮೊತ್ತ ಪಡೆದುಕೊಳ್ಳಲಾಗಿದೆ ಎಂದೂ ಆಡಿಟ್ ಲೆಕ್ಕಾಚಾರ ತಿಳಿಸಿದೆ.
ಮೃತಪಟ್ಟವರ ಹೆಸರಲ್ಲಿ ಅವರ ಆಶ್ರಿತರಿಗೆ ಸಾಮಾಜಿಕ ಪಿಂಚಣಿ ಹಣ ರವಾನೆಯಾಗುತ್ತಿರುವುದನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕಾದ ಪಂಚಾಯಿತಿ ಕಾರ್ಯದರ್ಶಿ ಅಥವಾ ಇದಕ್ಕೆ ಸಂಬಂಧಪಟ್ಟ ಸಿಬ್ಬಂದಿಯ ಕರ್ತವ್ಯಲೋಪ ಇದಕ್ಕೆ ಕಾರಣವಾಗಿರುವುದಾಗಿ ಆರೋಪ ಕೇಳಿ ಬರುತ್ತಿದೆ.
ಮೃತಪಟ್ಟವರ ಹೆಸರಲ್ಲೂ ಸಾಮಾಜಿಕ ಪಿಂಚಣಿ: ಲೋಕಲ್ ಫಂಡ್ ಆಡಿಟ್ ವಿಭಾಗದಿಂದ ಪತ್ತೆ
0
August 07, 2022
Tags