HEALTH TIPS

ಕಿಪ್ಬಿಗೆ ಗೆ ಸಂಬಂಧಿಸಿದ ಹಣಕಾಸಿನ ವಹಿವಾಟು; ಇಡಿ ಮುಂದೆ ಹಾಜರಾಗದ ಥಾಮಸ್ ಐಸಾಕ್; ಸಮನ್ಸ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ


               ತಿರುವನಂತಪುರ: ಕಿಫ್‍ಬಿ ಗೆ ಸಂಬಂಧಿಸಿದ ಹಣಕಾಸು ವ್ಯವಹಾರದಲ್ಲಿ ಜಾರಿ ನಿರ್ದೇಶನಾಲಯದ ಮುಂದೆ ಮಾಜಿ ಹಣಕಾಸು ಸಚಿವ ಥಾಮಸ್ ಐಸಾಕ್ ಹಾಜರಾಗುವುದಿಲ್ಲ ಎನ್ನಲಾಗಿದೆ.
              ವಿಚಾರಣೆಗೆ ಹಾಜರಾಗುವಂತೆ ಇಡಿ ನೀಡಿದ ಸಮನ್ಸ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಥಾಮಸ್ ಐಸಾಕ್ ಅವರ ಪ್ರಸ್ತುತ ನಿರ್ಧಾರವಾಗಿದೆ. ಇಡಿ ಮಾಜಿ ಸಚಿವರಿಗೆ ಸಮನ್ಸ್ ನೀಡಿದ್ದು, ಗುರುವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು.
               ನೊಟೀಸ್ ಬಂದ ನಂತರ ಪಕ್ಷದೊಂದಿಗೆ ಸಮಾಲೋಚಿಸಿದ ನಂತರ ಹಾಜರಾಗುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ಥಾಮಸ್ ಐಸಾಕ್ ಹೇಳಿದ್ದರು. ಅವರು ಹಾಜರಾದರೆ  ಇಡಿ ಮುಖ್ಯಮಂತ್ರಿಯನ್ನೂ ಪ್ರಶ್ನಿಸಬಹುದು. ಈ ಆತಂಕದಿಂದಾಗಿ ಇಡಿ ಸಮನ್ಸ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.
          ಮೊನ್ನೆ ಥಾಮಸ್ ಐಸಾಕ್ ಗೆ ಇಡಿ ನೋಟಿಸ್ ನೀಡಿತ್ತು. ಮೊದಲ ಬಾರಿಗೆ ಅವರನ್ನು ವಿಚಾರಣೆಗೆ ಕರೆದಾಗ ವೈಯಕ್ತಿಕ ಅನಾನುಕೂಲತೆ ಕಾರಣ ನೀಡಿ ಹಾಜರಾಗಿರಲಿಲ್ಲ. ಇದಾದ ಬಳಿಕ ಅವರನ್ನು ಮತ್ತೆ ವಿಚಾರಣೆಗೆ ಕರೆಸಲಾಗಿದೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries