ನವದೆಹಲಿ :ಕೆಂಪುಕೋಟೆಯಿಂದ ವಿಜಯ್
ಚೌಕ್ವರೆಗೆ ಬುಧವಾರ ಬೆಳಗ್ಗೆ ನಡೆದ ತಿರಂಗಾ ಬೈಕ್ ರ್ಯಾಲಿಯಲ್ಲಿ ಸಂಸದರು
ಭಾಗವಹಿಸಿದ್ದರು. ಕೇಂದ್ರ ಸಚಿವೆ ಸ್ಮೃತಿ ಇರಾನಿ ಕೂಡ ಬೈಕ್ನಲ್ಲಿ ಸಾಗುತ್ತಿರುವ
ದೃಶ್ಯ ವಿಡಿಯೋದಲ್ಲಿದೆ.
ರಾಜ್ಯಸಭಾ ಸಭಾಪತಿ ವೆಂಕಯ್ಯ ನಾಯ್ಡು ಅವರು ತಿರಂಗಾ ಬೈಕ್ ರ್ಯಾಲಿಗೆ ಚಾಲನೆ ನೀಡಿದರು.
ಕೆಂಪುಕೋಟೆಯಿಂದ
ಸಂಸತ್ತಿಗೆ 'ತಿರಂಗಾ ಬೈಕ್ ರ್ಯಾಲಿ'ಯಲ್ಲಿ ಪಾಲ್ಗೊಳ್ಳುವಂತೆ ಎಲ್ಲಾ ರಾಜಕೀಯ ಪಕ್ಷಗಳ
ಸಂಸದರಿಗೆ ಕೇಂದ್ರ ಕಲ್ಲಿದ್ದಲು, ಗಣಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್
ಜೋಶಿ ಅವರು ಮಂಗಳವಾರ ಬೆಳಗ್ಗೆ ಕರೆ ನೀಡಿದ್ದರು.
ಬುಧವಾರ ಬೆಳಗ್ಗೆ 8:30ಕ್ಕೆ ಬೈಕ್ ರ್ಯಾಲಿಯಲ್ಲಿ ಭಾಗವಹಿಸುವಂತೆ ಎಲ್ಲ ಪಕ್ಷಗಳ ಸಂಸದರಿಗೆ ಜೋಶಿ ಆಹ್ವಾನ ನೀಡಿದ್ದರು.