HEALTH TIPS

'ಆಧುನಿಕ ಕೇರಳದ ಶಿಲ್ಪಿ'; ಪಿಣರಾಯಿ ಸರ್ಕಾರವನ್ನು ನೋಡಿದಾಗ ಉಮ್ಮನ್ ಚಾಂಡಿ ಅವರ ಮಹತ್ವ ಅರಿವಾಗುತ್ತದೆ: ಕೆ ಸುಧಾಕರನ್



              ತಿರುವನಂತಪುರ: ಕೇರಳದ ಇತಿಹಾಸ ಕಂಡ ಅತ್ಯುತ್ತಮ ಮುಖ್ಯಮಂತ್ರಿಗಳಲ್ಲಿ ಉಮ್ಮನ್ ಚಾಂಡಿ ಒಬ್ಬರು ಎಂದು ಕೆಪಿಸಿಸಿ ಅಧ್ಯಕ್ಷ ಕೆ.ಸುಧಾಕರನ್ ಹೇಳಿದ್ದಾರೆ. ಅಭಿವೃದ್ಧಿಯ ಮೂಲಕ ಕೇರಳದ ಚಹರೆ ಬದಲಿಸಿದ ಉಮ್ಮನ್ ಚಾಂಡಿ ಅವರ ಆಡಳಿತ ರಾಜ್ಯÀದ ಸುವರ್ಣ ಯುಗವಾಗಿ ಇತಿಹಾಸದಲ್ಲಿ ದಾಖಲಾಗಲಿದೆ ಎಂದರು. ಉಮ್ಮನ್ ಚಾಂಡಿ ಅವರು ಕೇರಳ ವಿಧಾನಸಭೆಯ ಸುದೀರ್ಘ ಅವಧಿಯ ಸದಸ್ಯ ಎಂಬ ಸಾಧನೆ ಮಾಡಿದ್ದಕ್ಕಾಗಿ ಅಭಿನಂದಿಸಿ ಫೇಸ್ ಬುಕ್ ಪೋಸ್ಟ್ ನಲ್ಲಿ ಸುಧಾಕರನ್ ಶ್ಲಾಘಿಸಿದ್ದಾರೆ.
           ಎಲ್ಲಾ ಕ್ಷೇತ್ರಗಳನ್ನು ನಾಶ ಮಾಡಿ ಕೇರಳವನ್ನು ದಶಕಗಳ ಹಿಂದೆ ಸರಿಸಿದ ಪಿಣರಾಯಿ ಸರಕಾರವನ್ನು ನೋಡಿದಾಗ ಉಮ್ಮನ್ ಚಾಂಡಿ ಎಂಬ ಜನಪ್ರಿಯ ಮುಖ್ಯಮಂತ್ರಿಯ ಮೌಲ್ಯ ಕೇರಳಕ್ಕೆ ಅರಿವಾಗುತ್ತದೆ.
           'ಕೊಚ್ಚಿನ್ ಮೆಟ್ರೋ, ಕಣ್ಣೂರು ವಿಮಾನ ನಿಲ್ದಾಣ, ವಿಝಿಂಜಂ ಬಂದರು, ಎಲ್ಲಾ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳು, ಶೃತಿ ತರಂಗಂ, ಕಾರುಣ್ಯ, ಹೊಸ ರಸ್ತೆಗಳು, 100 ಕ್ಕೂ ಹೆಚ್ಚು ದೊಡ್ಡ ಸೇತುವೆಗಳು, ಏರಿಕೆಯಾಗದ ಮತ್ತು ಎಂದಿಗೂ ಸ್ಥಿರವಾಗಿದ್ದ  ಕಲ್ಯಾಣ ಪಿಂಚಣಿಗಳು, 4 ಲಕ್ಷಕ್ಕೂ ಹೆಚ್ಚು ಮನೆಗಳು, ಹೊಸ ಶಾಲಾ-ಕಾಲೇಜುಗಳು ಮತ್ತು ಲೆಕ್ಕವಿಲ್ಲದಷ್ಟು ಅಭಿವೃದ್ಧಿ ಮತ್ತು ಕಲ್ಯಾಣ ಚಟುವಟಿಕೆಗಳು ಉಮ್ಮನ್ ಚಾಂಡಿ ಅವರ ಹೆಸರನ್ನು ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಸಬಹುದಾಗಿಸುತ್ತದೆ ಎಂದು ಕೆ ಸುಧಾಕರನ್ ಹೇಳಿದರು.
          ಸುಧಾಕರನ್ ಫೇಸ್‍ಬುಕ್ ಪೆÇೀಸ್ಟ್‍ನಲ್ಲಿ, "ಆಧುನಿಕ ಕೇರಳದ ವಾಸ್ತುಶಿಲ್ಪಿ ಎಂದು ನಿಸ್ಸಂದೇಹವಾಗಿ ಹೇಳಬಹುದಾದ ಪುತ್ತುಪಲ್ಲಿಕರ್ ಚಾಂಡಿ ಕುಂಞÂ್ಞ ಗೆ ಅಭಿನಂದನೆಗಳು" ಎಂದು ಹೇಳಿದ್ದಾರೆ. ಸದನದಲ್ಲಿ 18728 ದಿನಗಳನ್ನು ಪೂರೈಸಿರುವ ಉಮ್ಮನ್ ಚಾಂಡಿಯವರಿಗೆ ಕಾಂಗ್ರೆಸ್ಸ್ ಮುಖಂಡರುಗಳು ಶುಭಹಾರೈಸಿದ್ದರು. ಉಮ್ಮನ್ ಚಾಂಡಿ ಅವರ ಭಾವಚಿತ್ರವನ್ನು ಹಂಚಿಕೊಂಡಿರುವ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಶಾಫಿ ಪರಂಬಿಲ್  ಉಮ್ಮನ್ ಚಾಂಡಿ ಜನಪರತೆಯಿಂದ ಉತ್ತೇಜಿತರಾದ ಜನರಿಗೆ ಪಠ್ಯಪುಸ್ತಕ ಎಂದು ಫೇಸ್‍ಬುಕ್‍ನಲ್ಲಿ ಬರೆದಿದ್ದಾರೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries