ಮಂಜೇಶ್ವರ: ತಲೇಕಳ ಶ್ರೀ ಸದಾಶಿವ ರಾಮ ವಿಠಲ ದೇವಸ್ಥಾನದಲ್ಲಿ ಹಾಗೂ ಶೇಷ ವನದಲ್ಲಿ ಧಾರ್ಮಿಕ ಆಚರಣೆಗಳೊಂದಿಗೆ ನಾಗರಪಂಚಮಿ ಪರ್ವ ಆಚರಿಸಲಾಯಿತು. ಶ್ರೀ ಕ್ಷೇತ್ರದಲ್ಲಿ ನಾಗರಪಂಚಮಿ ಪರ್ವದ ಅಂಗವಾಗಿ ಉಷಃಕಾಲ ಪೂಜಾನಂತರ ಶ್ರೀ ಕ್ಷೇತ್ರದ ಅನುವಂಶಿಕ ಮೊಕ್ತೇಸರ, ಪವಿತ್ರ ಪಾಣಿ ಸಂಕೇಸ ವೇದಮೂರ್ತಿ ಯಸ್.ವಾಸುದೇವ ಭಟ್ ಇವರ ನೇತ್ರತ್ವದೊಂದಿಗೆ ಅರ್ಚಕ ಶಿವರಾಜ ಅವರಿಂದ ಹಲವು ಧಾರ್ಮಿಕ ಸೇವೆಗಳು ನಡೆಯಿತು. ಪರಿವಾರ ದೇವರಾದ ಮಹಾ ಗಣಪತಿ ಸನ್ನಿಧಿಯಲ್ಲಿ ವಿಶೇಷ ಸೇವೆ, ಶೇಷ ಶಯನನಾದ ಮಹಾವಿಷ್ಣುರೂಪಿ ಶ್ರೀ ರಾಮವಿಠಲ ದೇವರ ಸನ್ನಿದಿಯಲ್ಲಿ ವಿಶೇಷ ಸೇವೆ, ಶ್ರೀ ಸದಾಶಿವ ದೇವರ ಸನ್ನಿಧಿಯಲ್ಲಿ ನಾಗಭೂಷಣನಿಗೆ ಪ್ರೀತ್ಯರ್ಥವಾಗಿ ಪಂಚಾಮೃತಾಭಿಷೇಖ ರುದ್ರಾಭಿಷೇಕಗಳು ನೆರವೇರಿತು. ಸಾಮೂಹಿಕ ಪ್ರಾರ್ಥನೆ ನಡೆಯಿತು.
ತಲೇಕಳದಲ್ಲಿ ನಾಗರ ಪಂಚಮಿ ಆಚರಣೆ
0
August 05, 2022