ಕಾಸರಗೋಡು: ಕುಂಬಳೆ ಸೀಮೆಯ ಪ್ರಸಿದ್ಧ ದೈವಸ್ಥಾನಗಳಲ್ಲಿ ಒಂದಾದ ಬೆದ್ರಡ್ಕ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ಮೊಕ್ತೇಸರ, ಧಾರ್ಮಿಕ ಮುಂದಾಳು ಕೋಟೆಕುಂಜ ಪ್ರಭಾಕರ ಆಳ್ವ ( 64) ಸೋಮವಾರ ಹೃದಯಘಾತದಿಂದ ನಿಧನರಾದರು. ಇವರು ಪ್ರತಿಷ್ಠಿತ ಕೋಟೆಕುಂಜ ಮನೆತನದ ದಿವಂಗತ ಪಟೇಲ್ ಜಯಲಕ್ಷ್ಮೀನಾರಾಯಣ ಆಳ್ವ ಮತ್ತು ಲಲಿತಾ ಆಳ್ವ ದಂಪತಿ ಪುತ್ರ. ಹಲವು ಧಾರ್ಮಿಕ ಕೇಂದ್ರಗಳ ಅಭಿವೃದ್ಧಿ ಮತ್ತು ಬ್ರಹ್ಮಕಲಶೋತ್ಸವಗಳ ನೇತೃತ್ವ ವಹಿಸಿದ್ದ ಇವರು ಬೆದ್ರಡ್ಕ ದೈವಸ್ಥಾನದ ಅಭಿವೃದ್ಧಿ ಸಮಿತಿ ಬ್ರಹ್ಮಕಲಶೋತ್ಸವ ಸಮಿತಿಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.
ಧಾರ್ಮಿಕ ಮುಂದಾಳು ಪ್ರಭಾಕರ ಆಳ್ವ ಕೋಟೆಕುಂಜ ನಿಧನ
0
August 09, 2022