ಮುಳ್ಳೇರಿಯ: ಸಂಸ್ಕøತ ಭಾರತಿ ಕಾಸರಗೋಡು ಮಂಗಳೂರು ಗ್ರಾಮಾಂತರ ವಿಭಾಗ ಇದರ ನೇತೃತ್ವದಲ್ಲಿ ಗುರು ಪೂಜಾ ಉತ್ಸವ-ಗುರು ಗೌರವ ಕುಂಟಾರು ಅರ್ಪಣಾ ಮಿನಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಬ್ರಹ್ಮಶ್ರೀ ವಾಸುದೇವ ತಂತ್ರಿಯ ಅನುಗ್ರಹ ಭಾಷಣ ಮಾಡಿದರು. ನಿವೃತ್ತ ಮುಖ್ಯ ಶಿಕ್ಷಕ ಶ್ರೀಕೃಷ್ಣ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಿವೃತ್ತ ಶಿಕ್ಷಕ ಪ್ರಕಾಶ್.ಯಂ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯ ಶಿಕ್ಷಕ ವೀರೋಜಿ ರಾವ್ ಹುಣ್ಸೆಡ್ಕ ಅವರಿಗೆ ಸಂಪ್ರದಾಯ ಪ್ರಕಾರವಾಗಿ ಗುರು ಗೌರವ ಸಲ್ಲಿಸಲಾಯಿತು. ಸಂಸ್ಕøತ ಶಿಕ್ಷಕ ವೆಂಕಟಕೃಷ್ಣ ಮುನಿಯಂಗಳ ಮುಖ್ಯ ಭಾಷಣ ಮಾಡಿದರು. ಮಕ್ಕಳಿಂದ ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ನಿಶಾ ಕುಂಟಾರು ಸ್ವಾಗತಿ ಪ್ರಸ್ತಾವಿಕ ಭಾಷಣ ಮಾಡಿದರು. ಪೂರ್ಣಿಮಾ ಟೀಚರ್ ವಂದಿಸಿದರು. ಭಾವನ ಕಾರ್ಯಕ್ರಮ ನಿರೂಪಿಸಿದರು.
ಕುಂಟಾರಿನಲ್ಲಿ ಗುರು ಪೂಜಾ ಉತ್ಸವ; ಗುರುಗೌರವ
0
August 05, 2022