ಮಲಪ್ಪುರಂ: ಪಿಎಫ್ ಐ ಹರತಾಳದ ವೇಳೆ ಮಲಪ್ಪುರಂನಲ್ಲೂ ಕೆಎಸ್ಆರ್ಟಿಸಿ ಬಸ್ ಮೇಲೆ ಕಲ್ಲು ತೂರಾಟ ನಡೆದಿದೆ. ಪೆÇನ್ನಾನಿ ಮತ್ತು ಪೆರಿಂತಲ್ಮಣ್ಣದಲ್ಲಿ ಕೆಎಸ್ಆರ್ಟಿಸಿ ಬಸ್ಗಳ ಮೇಲೆ ಪ್ರತಿಭಟನಕಾರರು ದಾಳಿ ನಡೆಸಿದ್ದಾರೆ. ಪೆÇನ್ನಾನಿ ದಾಳಿಯಲ್ಲಿ ಬಸ್ಸಿನ ಮುಂಭಾಗದ ಗಾಜು ಒಡೆದಿದೆ. ಘಟನೆಯಲ್ಲಿ ಹರತಾಳದಲ್ಲಿ ಭಾಗಿಯಾಗಿದ್ದ ಮೂವರನ್ನು ಬಂಧಿಸಲಾಗಿದೆ. ಪೆÇನ್ನಾನಿ ಮೂಲದ ಮುಬಾಶಿರ್, ಮುಹಮ್ಮದ್ ಶರೀಫ್ ಮತ್ತು ರಾಸಿಕ್ ಬಂಧಿತ ಆರೋಪಿಗಳು.
ಕೋಝಿಕ್ಕೋಡ್ನಿಂದ ಗುರುವಾಯೂರಿಗೆ ತೆರಳುತ್ತಿದ್ದ ಬಸ್ ಮೇಲೆ ಕಲ್ಲು ತೂರಾಟ ನಡೆದಿದೆ. ಇದೇ ಮಾದರಿಯಲ್ಲಿ ಪೆರಿಂತಲ್ಮಣ್ಣದಲ್ಲಿ ಕೆಎಸ್ಆರ್ಟಿಸಿ ಬಸ್ ಮೇಲೆ ಕಲ್ಲು ತೂರಾಟ ನಡೆದಿದೆ. ಅಂಗಡಿಪುರಂ ಮೇಲ್ಸೇತುವೆಯಿಂದ ಮಲಪ್ಪುರಂಗೆ ತೆರಳುತ್ತಿದ್ದ ಬತ್ತೇರಿ ಡಿಪೆÇೀದ ಕೆಎಸ್ಆರ್ಟಿಸಿ ಬಸ್ಗೆ ಕಲ್ಲು ತೂರಾಟ ನಡೆದಿದೆ. ಬಸ್ಸಿನ ಮುಂಭಾಗದ ಗಾಜು ಸಂಪೂರ್ಣ ಒಡೆದಿದ್ದು, ಚಾಲಕ ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ.
ಸೇತುವೆ ಮೇಲೆ ಇಬ್ಬರು ಯುವಕರು ಬಸ್ ಮೇಲೆ ಕಲ್ಲು ತೂರಿದ್ದಾರೆ ಎಂದು ಹಲ್ಲೆಗೊಳಗಾದ ಬಸ್ ಚಾಲಕ ತಿಳಿಸಿದ್ದಾರೆ. ಬಸ್ಸಿನ ಗಾಜು ಸಂಪೂರ್ಣ ಒಡೆದು ಬಸ್ಸಿನೊಳಗೆ ಕಲ್ಲು ಬಿದ್ದಿದೆ. ನಂತರ ದುಷ್ಕರ್ಮಿಗಳು ಬೈಕ್ನಲ್ಲಿ ಪರಾರಿಯಾಗಿದ್ದಾರೆ.
ಕಲ್ಲೇರದಲ್ಲಿ ಕೆಎಸ್ಆರ್ಟಿಸಿ ಬಸ್ ಚಾಲಕನ ಕಣ್ಣಿಗೆ ಗಾಯ. ಗಾಯಾಳು ಪೆರಿಂತಲ್ಮಣ್ಣ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಲ್ಲದೇ ತೇಂಜಿಪಾಲತ್ ನಲ್ಲಿ ಲಾರಿಯೊಂದಕ್ಕೂ ಕಲ್ಲು ತೂರಲಾಗಿದ್ದು, ಮೂವರನ್ನು ಪೆÇಲೀಸರು ವಶಕ್ಕೆ ಪಡೆದಿದ್ದಾರೆ.
ಹರತಾಳದ ಅಂಗವಾಗಿ ರಾಜ್ಯಾದ್ಯಂತ ವ್ಯಾಪಕ ದಾಳಿಗಳು ನಡೆದಿದ್ದರೂ, ಮಲಪ್ಪುರಂ ಜಿಲ್ಲೆಯಲ್ಲಿ ಯಾವುದೇ ದೊಡ್ಡ ಅಹಿತಕರ ಘಟನೆಗಳು ನಡೆದಿಲ್ಲ, ಆದರೆ ಇಂದು ಬೆಳಿಗ್ಗೆ 11 ಗಂಟೆಯವರೆಗೆ ಹರತಾಳದ ಅಂಗವಾಗಿ ಜಾಗ್ರತೆ ದೃಷ್ಟಿಯಿಂದ ಜಿಲ್ಲೆಯಲ್ಲಿ 108 ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ.
ಮಲಪ್ಪುರಂನಲ್ಲಿ 108 ಮಂದಿಯ ಬಂಧನ: ವಾಹನಗಳಿಗೆ ಕಲ್ಲು ತೂರಾಟ
0
September 23, 2022
Tags