HEALTH TIPS

ಕೇರಳ ಓಣಂ ಲಾಟರಿ: ಆಟೊ ಚಾಲಕನಿಗೆ ಒಲಿದ ₹ 25 ಕೋಟಿ ಬಂಪರ್‌ ಬಹುಮಾನ

 

             ತಿರುವನಂತಪುರ: ಕೇರಳ ಸರ್ಕಾರದ ಓಣಂ ಬಂಪರ್‌ ಲಾಟರಿ ಟಿಕೆಟ್‌ ಖರೀದಿಸಿದ್ದ ಇಲ್ಲಿನ ಆಟೊ ಚಾಲಕ ಅನೂಪ್‌ ಅವರಿಗೆ ಪ್ರಥಮ ಬಹುಮಾನ ₹ 25 ಕೋಟಿ ಲಭಿಸಿದೆ.

                 ಶನಿವಾರ ಅವರು ಲಾಟರಿ ಟಿಕೆಟ್‌ (ಟಿಜೆ750605) ಖರೀದಿಸಿದ್ದರು. ತೆರಿಗೆ ಹಾಗೂ ಕಮಿಷನ್‌ ಕಳೆದು ಅವರಿಗೆ ₹ 15.75 ಕೋಟಿ ಸಿಗಲಿದೆ.

              ಈ ಬಂಪರ್‌ ಬಹುಮಾನ ತಂದಿರುವ ಟಿಕೆಟ್‌ಅನ್ನು ಮಾರಾಟ ಮಾಡಿರುವ ತಿರುವನಂತಪುರದ ಭಗವತಿ ಏಜೆನ್ಸಿಗೆ ಕಮಿಷನ್‌ ರೂಪದಲ್ಲಿ ₹ 2.5 ಕೋಟಿ ಸಿಗಲಿದೆ.

                 ಅನೂಪ್‌ ಅವರು ಆಟೊ ಚಾಲಕರಾಗಿರುವ ಜೊತೆಗೆ ಬಾಣಸಿಗರೂ ಹೌದು. ಬಾಣಸಿಗನಾಗಿ ಒಳ್ಳೆಯ ಉದ್ಯೋಗ ಅರಸಿ ಮಲೇಷ್ಯಾಕ್ಕೆ ಹೋಗಲು ಯೋಜಿಸಿದ್ದರು. ಬೃಹತ್‌ ಮೊತ್ತದ ಲಾಟರಿ ಬಹುಮಾನ ಸಿಕ್ಕಿರುವ ಕಾರಣ ವಿದೇಶಕ್ಕೆ ಹಾರುವ ಯೋಚನೆಯನ್ನು ಕೈಬಿಟ್ಟಿದ್ದಾರೆ. ಈ ವರ್ಷವಷ್ಟೇ ಓಣಂ ಲಾಟರಿಯ ಬಂಪರ್‌ ಬಹುಮಾನದ ಮೊತ್ತವನ್ನು ₹ 25 ಕೋಟಿಗೆ ಹೆಚ್ಚಿಸಲಾಗಿದೆ. ಪ್ರತಿ ಟಿಕೆಟ್‌ ದರ ₹ 500 ಇದ್ದು, ದಾಖಲೆಯ 66.5 ಲಕ್ಷ ಟಿಕೆಟ್‌ಗಳು ಮಾರಾಟವಾಗಿದ್ದವು.

              ಕಳೆದ ವರ್ಷದ ಓಣಂ ಬಂಪರ್‌ ಲಾಟರಿಯ ಬಹುಮಾನದ ಮೊತ್ತ ₹ 12 ಕೋಟಿ ಇತ್ತು. ಆ ಬಹುಮಾನ ಸಹ ಕೊಚ್ಚಿಯ ಆಟೊ ಚಾಲಕ ಜಯಪಾಲನ್‌ ಎಂಬುವವರ ಪಾಲಾಗಿತ್ತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries