ಪೆರ್ಲ: ಸಾರಡ್ಕ ಆರಾಧನಾ ಕಲಾಭವನ ಮತ್ತು ಬಂಟ್ವಾಳ ತಾಲೂಕು ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ತಿಂಗಳ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಸೆ. 25ರಂದು ಸಾರಡ್ಕ ಆರಾಧನಾ ಕಲಾಭವನದಲ್ಲಿ ಜರುಗಲಿದೆ. ಕಾರ್ಯಕ್ರಮದ ಅಂಗವಾಗಿ ಉಪನ್ಯಾಸ, ಸನ್ಮಾನ, ಕವಿಗೋಷ್ಠಿ ನಡೆಯುವುದು.
ಮಧ್ಯಾಹ್ನ 2ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಆರಾಧನಾ ಸಂಗೀತ ಶಾಲೆ ಶಿಕ್ಷಕಿ, ಸಂಗೀತ ವಿದುಷಿ ಗೀತಾಸಾರಡ್ಕ ಸಮಾರಂಭ ಉದ್ಘಾಟಿಸುವರು. ಚುಟುಕು ಸಾಹಿತ್ಯ ಪರಿಷತ್ ತಾಲೂಕು ಘಟಕ ಅಧ್ಯಕ್ಷ ಆನಂದ ರೈ ಅಡ್ಕಸ್ಥಳ ಸಭಾ ಅಧ್ಯಕ್ಷತೆ ವಹಿಸುವರು. ನರಿಮೊಗರು ಸರಸ್ವತೀ ವಿದ್ಯಾಮಂದಿರ ಪ್ರಾಂಶುಪಾಲ ರಾಜಾರಾಮ ವರ್ಮ ವಿಟ್ಲ ಅವರು ಕವಿಗೋಷ್ಠಿ ಅಧ್ಯಕ್ಷತೆ ವಹಿಸುವರು. ಬರವಣಿಗೆ ಮತ್ತು ಸಾಹಿತ್ಯ ಎಂಬ ವಿಷಯದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ಶಂಕರ್ ಸಾರಡ್ಕ ಉಪನ್ಯಾಸ ನೀಡುವರು. ದ.ಕ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಹರೀಶ್ ಸುಲಾಯ ಒಡ್ಡಂಬೆಟ್ಟು ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಈ ಸಂದರ್ಭ ಹಿರಿಯ ಸಾಹಿತಿ ಹರೀಶ್ ಪೆರ್ಲ ಅವರನ್ನು ಸನ್ಮಾನಿಸಲಾಗುವುದು.ಈ ಸಂದರ್ಭ ನಡೆಯುವ ಕವಿಗೋಷ್ಠಿಯಲ್ಲಿ 30ಕ್ಕೂ ಹೆಚ್ಚುಮಂದಿ ಕವಿಗಳು ಸ್ವರಚಿತ ಕವಿತೆ ವಾಚಿಸುವರು.
ಸಾರಡ್ಕ ಆರಾಧನಾ ಕಲಾಭವನದಲ್ಲಿ 25ರಂದು ಸಾಹಿತ್ಯ ಸಂಭ್ರಮ, ಉಪನ್ಯಾಸ, ಕವಿಗೋಷ್ಠಿ
0
September 21, 2022