ಮಂಜೇಶ್ವರ: ರಾಷ್ಟೀಯ ಹೆದ್ದಾರಿ ಕಾಮಗಾರಿಯ ಅಶಾಸ್ತ್ರೀಯತೆ ಪ್ರಶ್ನಿಸಿ ಹೋರಾಟ ಮಾಡುತ್ತಿರುವ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಮಂಜೇಶ್ವರ ಮೂರನೇ ಹಂತದ ಹೊರಾಟವಾಗಿ ಕುಂಜತ್ತೂರಿನಲ್ಲಿ ನಡೆಯುತ್ತಿರುವ ರಿಲೇ ಧರಣಿ ಸತ್ಯಾಗ್ರದ ನಾಲ್ಕನೇ ದಿನ ಮಂಜೇಶ್ವರ ಪಂಚಾಯತಿ ಮಾಜಿ ಅಧ್ಯಕ್ಷರು, ಪ್ರಸ್ತುತ ಸದಸ್ಯೆಯಾಗಿರುವ ನುಶ್ರತ್ ಜಹಾನ ಅವರ ನೇತೃತ್ವದಲ್ಲಿ ಊರಿನ ಮಹಿಳೆಯರು ಧರಣಿಯಲ್ಲಿ ಸಹಭಾಗಿಯಾದರು.
ನಾಲ್ಕನೇ ದಿನ ಧರಣಿ ಸತ್ಯಾಗ್ರಹ ಹೋರಾಟ ಸಮಿತಿ ಅಧ್ಯಕ್ಷ ಸೈಫುಲ್ಲ ತಂಙಳ್ ಅಧ್ಯಕ್ಷತೆಯಲ್ಲಿ ನುಸ್ರತ್ ಜಹಾನ್ ಉದ್ಘಾಟಿಸಿದರು, ಕುಞಮೋನು ತೂಮಿನಾಡು ಸ್ವಾಗತಿಸಿ ಹಸೈನಾರ್ ಸೆವೆನ್ಸ್ಟಾರ್ ಪ್ರಾಸ್ಥಾವಿಕವಾಗಿ ಮಾತನಾಡಿದರು.
ಈ ಸಂದರ್ಭ ವೇದಿಕೆಯಲ್ಲಿ ಎಸ್.ಎಂ.ಬಶೀರ್, ಅಶ್ರಫ್ ಕುಂಜತ್ತೂರು, ಅಬೂಬಕ್ಕರ್ ತೂಮಿನಾಡು, ಜಬ್ಬಾರ್ ಪದವ್, ರಿಯಾಸ್ ಬಾಚಳಿಕೆ, ಶಬೀರ್ ಹೊಸೂರು, ಹನೀಫ್ ತೂಮಿನಾಡು, ವಾರ್ಡು ಸದಸ್ಯರುಗಳಾದ ಉಮ್ಮು ಕುಲ್ಸುಂ, ಲಕ್ಷ್ಮಣ ಕಣ್ವತೀರ್ಥ ಉಪಸ್ಥಿತರಿದ್ದರು.
ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಸತ್ಯಾಗ್ರಹದ ನಾಲ್ಕನೇ ದಿನ: ಗಮನ ಸೆಳೆದ ಮಹಿಳೆಯರ ಧರಣಿ
0
September 18, 2022