ಕಾಸರಗೋಡು: ಕೇರಳ ಅರಣ್ಯ ಮತ್ತು ವನ್ಯಜೀವಿ ಇಲಾಖೆ ಹಾಗೂ ಕಾಸರಗೋಡು ಸಾಮಾಜಿಕ ಅರಣ್ಯ ವಿಭಾಗದ ನೇತೃತ್ವದಲ್ಲಿ 'ಸ್ವಚ್ಛ್ ಸಾಗರ್-ಸುರಕ್ಷಿತ ಸಾಗರ್'ಅಭಿಯಾನದ ಅಂಗವಾಗಿ ತ್ರಕ್ಕನ್ನಾಡಿನಲ್ಲಿ ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಉದುಮ ಗ್ರಾ.ಪಂ., ಜಿ.ಎಫ್.ಎಸ್.ಎಸ್.ಎಸ್ ಬೇಕಲ ಎನ್.ಸಿ.ಸಿ ಘಟಕ ಹಾಗೂ ಬೇಕಲ ಕರಾವಳಿ ಪೆÇೀಲೀಸ್ ವತಿಯಿಂದ ತ್ರಿಕನ್ನಾಡು ಕರಾವಳಿಯಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು.
ಉದುಮ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ಲಕ್ಷ್ಮಿ ಉದ್ಘಾಟಿಸಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಧನೇಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪಂಚಾಯಿತಿ ಸದಸ್ಯರಾದ ಕೆ.ವಿನಯಕುಮಾರ್, ಶೈನಿಮೋಳ್, ಜಿಎಫ್ ಎಸ್ ಎಸ್ ಬೇಕಲ ಶಿಕ್ಷಕ ವಿ.ಗಂಗಾಧರನ್ ಹಾಗೂ ಕರಾವಳಿ ಪೆÇಲೀಸ್ ಇನ್ಸ್ ಪೆಕ್ಟರ್ ಇ.ಎಸ್.ಸ್ಯಾಮ್ಸನ್ ಉಪಸ್ಥಿತರಿದ್ದರು. ವಲಯ ಅರಣ್ಯಾಧಿಕಾರಿ ಕೆ.ವಿ.ಅರುಣೇಶ್ ಸ್ವಾಗತಿಸಿದರು. ವಲಯ ಅರಣ್ಯಾಧಿಕಾರಿ ಎಂ.ಚಂದ್ರನ್ ವಂದಿಸಿದರು.
ತ್ರಿಕ್ಕನ್ನಾಡ್ನಲ್ಲಿ ಕರಾವಳಿ ಸ್ವಚ್ಛತಾ ದಿನಾಚರಣೆ
0
September 18, 2022
Tags