HEALTH TIPS

ಆಯಂಟಿರೆಟ್ರೊವೈರಲ್‌ ಔಷಧಗಳ ಕೊರತೆ: ಕೇಂದ್ರಕ್ಕೆ 'ಸುಪ್ರೀಂ' ನೋಟಿಸ್‌

 

         ನವದೆಹಲಿ : ದೇಶದಲ್ಲಿ ಎಚ್‌ಐವಿ ಪೀಡಿತರ ಚಿಕಿತ್ಸೆಗಾಗಿ ಬಳಸಲಾಗುವ ಆಯಂಟಿರೆಟ್ರೊವೈರಲ್‌ ಔಷಧಿಯ ಕೊರತೆ ಇದೆ ಎಂದು ಆರೋಪಿಸಿ ಸಲ್ಲಿಸಲಾಗಿರುವ ಅರ್ಜಿಯೊಂದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಮಂಗಳವಾರ ಕೇಂದ್ರ ಸರ್ಕಾರಕ್ಕೆ ನೋಟಿಸ್‌ ನೀಡಿದೆ.

                        ಇಂಡಿಯನ್‌ ನೆಟ್ವರ್ಕ್‌ ಫಾರ್‌ ಪೀಪಲ್‌ ಲಿವಿಂಗ್‌ ವಿಥ್‌ ಎಚ್‌ಐವಿ/ಏಡ್ಸ್‌ ಎಂಬ ಸ್ವಯಂ ಸೇವಾ ಸಂಸ್ಥೆ (ಎನ್‌ಜಿಒ) ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್‌ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠವು ಈ ಸಂಬಂಧ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಆರೋಗ್ಯ ಸಚಿವಾಲಯ, ರಾಷ್ಟ್ರೀಯ ಏಡ್ಸ್‌ ನಿಯಂತ್ರಣ ಸಂಸ್ಥೆ ಹಾಗೂ ಇತರರಿಗೆ ಸೂಚಿಸಿದೆ.

                  'ದೇಶದಲ್ಲಿ ಆಯಂಟಿರೆಟ್ರೊವೈರಲ್‌ ಔಷಧಿಯ ದಾಸ್ತಾನು ಇಲ್ಲ ಎಂದು ಅರ್ಜಿದಾರರು ದೂರಿದ್ದಾರೆ. 2021-22ನೇ ಸಾಲಿನ ಟೆಂಡರ್‌ ಅನ್ನು 2021ರ ಆಗಸ್ಟ್‌ನಲ್ಲಿ ಕರೆಯಬೇಕಾಗಿತ್ತು. ಆದರೆ ಅದನ್ನು 2021ರ ಡಿಸೆಂಬರ್‌ನಲ್ಲಿ ಕರೆಯಲಾಯಿತು. ಅದು ವಿಫಲವಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಎರಡು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸಿ' ಎಂದು ನ್ಯಾಯಪೀಠವು ನಿರ್ದೇಶಿಸಿತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries