HEALTH TIPS

'ಶಿಕ್ಷಣ ಸಂಸ್ಥೆಗಳಿಗೆ ಅಧಿಕಾರವಿದೆ..' ; ಹಿಜಾಬ್ ನಿಷೇಧದ ಕುರಿತು ಸುಪ್ರೀಂಕೋರ್ಟ್ ಮಹತ್ವದ ಅಭಿಪ್ರಾಯ

 

               ನವದೆಹಲಿ : ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧಿಸುವ ವಿಷಯದಲ್ಲಿ ಸಮವಸ್ತ್ರಗಳನ್ನ ನಿಗದಿಪಡಿಸುವ ಅಧಿಕಾರ ಶಿಕ್ಷಣ ಸಂಸ್ಥೆಗಳಿಗೆ ಇದೆ ಎಂದು ನಿಯಮಗಳು ಹೇಳುತ್ತವೆ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ. ಆದಾಗ್ಯೂ, ಹಿಜಾಬ್ ವಿಭಿನ್ನವಾಗಿದೆ ಎಂದು ಸುಪ್ರೀಂಕೋರ್ಟ್ ಗಮನಿಸಿದೆ.

ಸುದ್ದಿ ಸಂಸ್ಥೆ ಎಎನ್‌ಐ ವರದಿಯ ಪ್ರಕಾರ, ಈ ವಿಷಯದ ಬಗ್ಗೆ ಸುಪ್ರೀಂ ಕೋರ್ಟ್ ವಿಚಾರಣೆಯನ್ನ ಸೆಪ್ಟೆಂಬರ್ 19ರಂದು ಸೋಮವಾರ ಮುಂದುವರಿಸಲಿದೆ.

               ಏತನ್ಮಧ್ಯೆ, ಈ ವಾರದ ಆರಂಭದಲ್ಲಿ, ಹಿಜಾಬ್ ನಿಷೇಧ ಮತ್ತು ಈ ವಿಷಯದ ಬಗ್ಗೆ ಹೈಕೋರ್ಟ್‌ನ ನಂತರದ ತೀರ್ಪಿನಿಂದಾಗಿ ಕರ್ನಾಟಕದ ಶಿಕ್ಷಣ ಸಂಸ್ಥೆಗಳಿಂದ ವಿದ್ಯಾರ್ಥಿಗಳನ್ನ ಕೈಬಿಡುವ ಬಗ್ಗೆ ಯಾವುದೇ ಅಧಿಕೃತ ಅಂಕಿಅಂಶವಿದೆಯೇ ಎಂದು ಸುಪ್ರೀಂಕೋರ್ಟ್ ಬುಧವಾರ ಪ್ರಶ್ನಿಸಿದೆ.

                'ಈ ಹಿಜಾಬ್ ನಿಷೇಧ ಮತ್ತು ಹೈಕೋರ್ಟ್‌ನ ನಂತರದ ತೀರ್ಪಿನಿಂದಾಗಿ, 20, 30, 40 ಅಥವಾ 50 ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿದಿದ್ದಾರೆ ಎಂಬ ಅಧಿಕೃತ ಅಂಕಿಅಂಶಗಳು ನಿಮ್ಮಲ್ಲಿವೆಯೇ?', ಎಂದು ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರ ನ್ಯಾಯಪೀಠವು ಅರ್ಜಿದಾರರಲ್ಲಿ ಒಬ್ಬರ ಪರ ವಕೀಲರು ವಿದ್ಯಾರ್ಥಿಗಳು, ವಿಶೇಷವಾಗಿ ಬಾಲಕಿಯರು ಶಾಲೆಯಿಂದ ಹೊರಗುಳಿಯುವ ವಿಷಯವನ್ನ ಎತ್ತಿದ ನಂತ್ರ ಪ್ರಶ್ನಿಸಿತು.

               ಅರ್ಜಿದಾರರಲ್ಲಿ ಒಬ್ಬರನ್ನ ಪ್ರತಿನಿಧಿಸುವ ಹಿರಿಯ ವಕೀಲ ಹುಝೆಫಾ ಅಹ್ಮದಿ ಅವ್ರು ವರದಿಯನ್ನು ಉಲ್ಲೇಖಿಸಿ, ಅದು ಹಲವಾರು ವಿದ್ಯಾರ್ಥಿಗಳ ಸಾಕ್ಷ್ಯಗಳನ್ನ ಹೊಂದಿದೆ ಎಂದು ಹೇಳಿದರು.

               'ಈ ನಿರ್ದಿಷ್ಟ ತೀರ್ಪಿನ ನಂತರ 17,000 ವಿದ್ಯಾರ್ಥಿಗಳು ನಿಜವಾಗಿಯೂ ಪರೀಕ್ಷೆಯಿಂದ ದೂರ ಉಳಿದಿದ್ದಾರೆ ಎಂದು ನನ್ನ ಸ್ನೇಹಿತ (ವಕೀಲರಲ್ಲಿ ಒಬ್ಬರು) ನನಗೆ ತಿಳಿಸಿದರು' ಎಂದು ಅವರು ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಮೇಲಿನ ನಿಷೇಧವನ್ನ ತೆಗೆದುಹಾಕಲು ನಿರಾಕರಿಸಿರುವ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಬಗ್ಗೆ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಪೀಠಕ್ಕೆ ತಿಳಿಸಿದರು.

                ಈ ವಿಷಯದಲ್ಲಿ ಸರ್ಕಾರಿ ಆದೇಶದ ಪರಿಣಾಮವೆಂದರೆ, ಈ ಹಿಂದೆ ಶಾಲೆಗಳಲ್ಲಿ ಜಾತ್ಯತೀತ ಶಿಕ್ಷಣವನ್ನ ಪಡೆಯುತ್ತಿದ್ದ ಬಾಲಕಿಯರು ಮದರಸಾಗಳಿಗೆ ಹಿಂತಿರುಗುವಂತೆ ಒತ್ತಾಯಿಸಲಾಗುವುದು ಎಂದು ಅಹ್ಮದಿ ಹೇಳಿದರು.

                'ಒಂದು ಧಾರ್ಮಿಕ ಆಚರಣೆಯು ಯಾವುದೇ ರೀತಿಯಲ್ಲಿ ನ್ಯಾಯಸಮ್ಮತ ಅಥವಾ ಲೌಕಿಕ ಶಿಕ್ಷಣ ಅಥವಾ ಐಕ್ಯತೆಗೆ ಅಡ್ಡಿಪಡಿಸುತ್ತದೆ ಎಂದು ಯಾರಾದರೂ ಏಕೆ ಭಾವಿಸಬೇಕು? ಯಾರಾದರೂ ಹಿಜಾಬ್ ಧರಿಸಿ ಶಾಲೆಗೆ ಹೋದರೆ ಯಾರಾದರೂ ಏಕೆ ಕೋಪಗೊಳ್ಳಬೇಕು? ಇತರ ವಿದ್ಯಾರ್ಥಿಗಳಿಗೆ ಏಕೆ ಸಮಸ್ಯೆ ಇರಬೇಕು' ಎಂದು ಪ್ರಶ್ನಿಸಿದರು.

                ಹಿಜಾಬ್ ಧರಿಸಿದ ವ್ಯಕ್ತಿಯನ್ನ ಧರ್ಮ ಮತ್ತು ಲಿಂಗದ ಆಧಾರದ ಮೇಲೆ ತಾರತಮ್ಯ ಮಾಡಲು ಸಾಧ್ಯವಿಲ್ಲ ಎಂಬುದು ಈ ಪ್ರಕರಣದ ಪ್ರಮುಖ ಭಾಗಗಳಲ್ಲಿ ಒಂದಾಗಿದೆ ಎಂದು ಇನ್ನೊಬ್ಬ ಅರ್ಜಿದಾರರ ಪರ ಹಿರಿಯ ವಕೀಲ ರಾಜೀವ್ ಧವನ್ ವಾದಿಸಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries