ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಶರನ್ನವರಾತ್ರಿ ಪ್ರಯುಕ್ತ ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು ಪ್ರತಿನಿತ್ಯ ನಡೆಯುತ್ತಲಿವೆ. ಅ.1 (ಇಂದು) ರಾತ್ರಿ 8. ರಿಂದ ಕೇರಳದ ಹೆಸರಾಂತ ಸಂಗೀತ ಕಲಾವಿದರಾಗಿ ದೇಶ ವಿದೇಶಗಳಲ್ಲಿ ಪ್ರಖ್ಯಾತಿ ಪಡೆದ ತ್ರಿಶೂರಿನ ಪ್ರಶಾಂತ್ ವರ್ಮ ಮತ್ತು ಬಳಗದವರಿಂದ “ಗಾನ ವೈಭವ” ಸಂಗೀತ ಕಾರ್ಯಕ್ರಮ ನಡೆಯಲಿದೆ. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕಾಗಿ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.
ಕೊಂಡೆವೂರು ಮಠದಲ್ಲಿ ಪ್ರಶಾಂತ್ ವರ್ಮರ ಗಾನವೈಭವ
0
September 30, 2022
Tags