ಕೊಟ್ಟಾಯಂ : ನಾಪತ್ತೆಯಾಗಿ ಎರಡು ವರ್ಷಗಳ ಬಳಿಕ ಮರಳಿ ಬಂದಿರುವ ರತೀಶ್ ಈಗ ಮನೆ, ರಾಜ್ಯ ಮಾತ್ರವಲ್ಲದೆ ರಾಷ್ಟ್ರೀಯ ಮಾಧ್ಯಮಗಳಲ್ಲೂ ಸ್ಟಾರ್ ಆಗಿದೆ.
ಕೊಟ್ಟಾಯಂ ಪುತ್ತುಪಲ್ಲಿಯಲ್ಲಿ ಗೃಹಿಣಿ ಉಷಮ್ಮ ಸಾಕಿದ ಬೆಕ್ಕು ರತೀಶ್. ಪ್ರಾಣಿಶಾಸ್ತ್ರಜ್ಞರ ಪ್ರಕಾರ, ದಾರಿತಪ್ಪಿ ತೆರಳಿದ ಗಂಡು ಬೆಕ್ಕುಗಳು ಹಿಂತಿರುಗುವುದು ಸಾಮಾನ್ಯವಾದರೂ, ಎರಡು ವರ್ಷಗಳ ವಿರಾಮದ ನಂತರ ಅವು ಹಿಂತಿರುಗುವುದು ಅಪರೂಪ ಎಂದಿರುವರು.
ಉಷಮ್ಮ 2016ರಲ್ಲಿ ರತೀಶ್ನನ್ನು ಕರೆದುತಂದು ಸಾಕತೊಡಗಿದ್ದರು. ಹೃತಿಕ್ ರೋಷನ್ ಚಿತ್ರ ಕಟ್ಟಪ್ಪನದ 'ಉಣರೂ ರತೀಶ್, ಒನ್ನು' ಎಂಬ ಡೈಲಾಗ್ನ ನಂತರ ಬೆಕ್ಕಿಗೆ ರತೀಶ್ ಎಂದು ಹೆಸರಿಟ್ಟಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಅಪಘಾತವೊಂದರಲ್ಲಿ ರತೀಶ್ ಗಾಯಗೊಂಡಿದ್ದ. ಇದಾದ ಬಳಿಕ ಆರು ಸಾವಿರ ರೂಪಾಯಿ ವೆಚ್ಚದಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು ಎನ್ನುತ್ತಾರೆ ಉಷಮ್ಮ.
ಶಸ್ತ್ರಚಿಕಿತ್ಸೆಯ ಎರಡು ವರ್ಷಗಳ ನಂತರ, ಲಾಕ್ಡೌನ್ ಸಮಯದಲ್ಲಿ ರತೀಶ್ ಅನಿರೀಕ್ಷಿತವಾಗಿ ಕಾಣೆಯಾದ. ಪ್ರೀತಿಯ ಬೆಕ್ಕಿಗೆ ಏನಾಯಿತು ಎಂದು ತಿಳಿಯಲಾಗದೆ ಉಷಮ್ಮ ಹಾಗೂ ಮನೆಯವರು ತೀವ್ರ ಚಿಂತಾಕ್ರಾಂತರಾಗಿದ್ದರು. ಆದರೆ ಆತನಿಗೆ ಯಾವುದೇ ಆಪತ್ತು ಬರುವುದಿಲ್ಲ ಎಂದು ನಂಬಿ ಕಾಯುತ್ತಿದ್ದರು.
ರತೀಶ್ ನಾಪತ್ತೆಯಿಂದ ಅಕ್ಕಪಕ್ಕದ ಮನೆಯವರು ಹಾಗೂ ಸುತ್ತಮುತ್ತಲಿನ ಮಕ್ಕಳು ಆತಂಕಗೊಂಡಿದ್ದರು. ಆದರೆ ಕೆಲ ದಿನಗಳ ಹಿಂದೆ ಅನಿರೀಕ್ಷಿತವಾಗಿ ಸುತ್ತಮುತ್ತ ಪ್ರತ್ಯಕ್ಷನಾದ ರತೀಶ್ ಉಷಮ್ಮನನ್ನು ನೋಡಲು ಓಡಿ ಬಂದು ಆಕೆಯ ವಾಸನೆಯನ್ನು ನೋಡಿ ತನ್ನ ಪ್ರೀತಿಯನ್ನು ಎಲ್ಲಿಲ್ಲದ ಭಾವತೀವ್ರತೆಯಲ್ಲಿ ತೋರ್ಪಡಿಸಿ ಅವರೊಂದಿಗೆ ಮಂಡಿಯೂರಿ ಕುಳಿತಿರುವುದು ರೋಮಾಂಚನದೊಂದಿಗೆ ಕಣ್ಣಲ್ಲಿ ಆನಂದ ಭಾಷ್ಪ ಎಂತವರನ್ನೂ ಮೂಡಿಸದಿರದು.
ಅಕ್ಕಪಕ್ಕದ ಮನೆಯವರು ಹಾಗೂ ಸುತ್ತಮುತ್ತಲಿನ ಮಕ್ಕಳು ರತೀಶ್ ಹಿಂದಿರುಗಿದ ವರ್ತಮಾನ ತಿಳಿದು ನೋಡಲು ಜಮಾಯಿಸಿದ್ದರು. ನಾಪತ್ತೆಯಾಗಿದ್ದ ರತೀಶ್ನನ್ನು ಮರಳಿ ಪಡೆದ ನಂತರ ಉಷಮ್ಮ ಪ್ರಪುಲ್ಲರಾಗಿದ್ದಾರೆ. ರಾಷ್ಟ್ರೀಯ ಮಾಧ್ಯಮದವರು ಕೂಡ ರತೀಶ್ ನನ್ನು ಭೇಟಿ ಮಾಡಲು ಉಷಮ್ಮ ಅವರ ಮನೆಗೆ ಬಂದಿದ್ದು, ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ.
ಎರಡು ವರ್ಷಗಳಿಂದ ಕಾಣೆಯಾಗಿದ್ದ ರತೀಶ್ ಅಚ್ಚರಿಯೆಂಬಂತೆ ಮರಳಿದ!: ಉಷಮ್ಮ ಮತ್ತು ಸ್ನೇಹಿತರಲ್ಲಿ ಮುಗಿಲುಮುಟ್ಟಿದ ಹರ್ಷ
0
September 18, 2022
Tags