ಮುಳ್ಳೇರಿಯ: ಮುಳಿಯಾರು ಗ್ರಾಮದ ಬಳ್ಳಮೂಲೆ, ಬೆಳ್ಳಿಪ್ಪಾಡಿ, ಚರವಿಯಲ್ಲಿ ಆನೆಹಿಂಡುಗಳ ಧಾಳಿಯಾಗಿದ್ದು ಬೆಳೆ ನಾಶಪಡಿಸುತ್ತಾ ಅಟ್ಟಹಾಸದಿಂದ ಮುಂದುವರಿದಿದೆ.
ಸೋಮವಾರ, ಮಂಗಳವಾರ ರಾತ್ರಿ ಈ ಪ್ರದೇಶಗಳಲ್ಲಿ ಕಾಡಾನೆಗಳು ನಿರಂತರ ದಾಳಿ ನಡೆಸಿದ್ದು, ಫಲಭರಿತ ತೆಂಗಿನಮರಗಳು, ಅಡಿಕೆ , ಬಾಳೆ ಇತ್ಯಾದಿ ಬೆಳೆಗಳನ್ನು ನಾಶಮಾಡಿವೆ.
ಕರುಣಾಕರನ್ ನಾಯರ್, ಬಳ್ಳಮೂಲೆ ಗೋವಿಂದ ಭಟ್, ಗೋಪಾಲಕೃಷ್ಣ ಭಟ್, ಲೀಲಾ, ಚಂದ್ರನ್, ಮಾಧವನ್, ಶ್ರೀಧರನ್ ಸೇರಿದಂತೆ ಹಲವರ ತೋಟಗಳನ್ನು ನಾಶಪಡಿಸಿವೆ. ಕೃಷಿಕರು ಈ ದುರಂತದ ಪರಿಣಾಮವನ್ನು ತಾಳಲಾರದೆ ಅಧಿಕೃತರಿಗೆ ದೂರು ನೀಡಿದ್ದು, ಪರಿಶೀಲನೆ ನಡೆಸುವುದಾಗಿ ಅಧಿಕೃತರು ತಿಳಿಸಿದ್ದಾರೆ.