HEALTH TIPS

ಸ್ವಚ್ಛ ಭಾರತ್ ಯೋಜನೆ ಜಾರಿಯಾದರೆ ಬೀದಿನಾಯಿಗಳ ಕಾಟ ಕಡಿಮೆಯಾಗಲಿದೆ: ಪ್ರಧಾನಿಯವರ ಕಲ್ಪನೆಯನ್ನು ಕೇರಳ ಅನುಕರಿಸಬೇಕು: ಕೇಂದ್ರ ಸಚಿವ ವಿ ಮುರಳೀಧರನ್

               
              ತಿರುವನಂತಪುರಂ: ಕೇರಳದಲ್ಲಿ ಸ್ವಚ್ಛತೆ ಕಾಪಾಡುವ ಯೋಜನೆಯಾದ ಸ್ವಚ್ಛ ಭಾರತ್ ಪರಿಣಾಮಕಾರಿಯಾಗಿ ಅನುμÁ್ಠನಗೊಂಡರೆ ಬೀದಿ ನಾಯಿಗಳ ಹಾವಳಿಯನ್ನು ಕಡಿಮೆ ಮಾಡಬಹುದು ಎಂದು ವಿ ಮುರಳೀಧರನ್ ಹೇಳಿರುವರು.
            ಮುರಳೀಧರನ್ ಮಾತನಾಡಿ, ಸ್ವಚ್ಛತೆ ಕಾಪಾಡುವ ಪ್ರಧಾನಿಯ ಮಾದರಿಯನ್ನು ಕೇರಳ ಸರ್ಕಾರ ಅನುಸರಿಸುವ ಸಮಯ ಬಂದಿದೆ ಎಂದು ಸೂಚಿಸಿದರು.
             ರಸ್ತೆಗಳು ಮತ್ತು ಪರಿಸರಗಳನ್ನು ಸ್ವಚ್ಛಗೊಳಿಸಲು ಸಾಮೂಹಿಕ ಪ್ರಯತ್ನಗಳು ಆಗಬೇಕು. ಶುದ್ಧ ಸಮುದ್ರಗಳನ್ನು ಕಾಪಾಡಿಕೊಳ್ಳಲು ಮತ್ತು ಸಮುದ್ರ ಮಾಲಿನ್ಯವನ್ನು ಕಡಿಮೆ ಮಾಡಲು ಪ್ರಧಾನ ಮಂತ್ರಿ ಜಾರಿಗೆ ತಂದಿರುವ ಸ್ವಚ್ಛ ಸಾಗರ್ ಸೇಫ್ ಸಾಗರ್ ಅಭಿಯಾನವನ್ನು ಪ್ರತಿಯೊಬ್ಬರೂ ಕೈಗೆತ್ತಿಕೊಳ್ಳುವಂತೆ ಅವರು ಕೇಳಿಕೊಂಡರು. ಆರೋಗ್ಯಕರ ಭವಿಷ್ಯಕ್ಕಾಗಿ ಸ್ವಚ್ಛ ಪ್ರಕೃತಿಯ ಪ್ರಧಾನಮಂತ್ರಿಯವರ ಕರೆಯನ್ನು ಭವಿಷ್ಯದ ಪೀಳಿಗೆಯ ಜವಾಬ್ದಾರಿಯಾಗಿ ನೋಡಬೇಕು ಎಂದು ಕೇಂದ್ರ ಸಚಿವರು ಹೇಳಿದರು.
         ಪಕ್ಷ ರಾಜಕಾರಣ, ಜಾತಿ ಭೇದವಿಲ್ಲದೆ ಪರಿಸರದ ಹಿತದೃಷ್ಟಿಯಿಂದ ಜನರು ಒಂದಾಗಬೇಕು. ಸ್ವಚ್ಛತಾ ಅಭಿಯಾನಕ್ಕೆ ರಾಜ್ಯ ಸರ್ಕಾರದ ಪ್ರತಿನಿಧಿಗಳು ಗೈರು ಹಾಜರಾಗಿರುವುದನ್ನು ಸಚಿವರು ಟೀಕಿಸಿದರು. ಅಂತರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನದ ಅಂಗವಾಗಿ ಕೋವಲಂನಲ್ಲಿ ಆಯೋಜಿಸಿದ್ದ ಕರಾವಳಿ ಸಂರಕ್ಷಣಾ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries