HEALTH TIPS

ಕೇಂದ್ರ ಜಾಗೃತ ಆಯೋಗದಿಂದ ಶ್ರೀರಾಮ್ ವೆಂಕಟರಾಮನ್ ವಿರುದ್ಧ ಕಡತದಲ್ಲಿ ದೂರು ಸ್ವೀಕಾರ: ಸೇವೆಯಿಂದ ವಜಾಗೊಳಿಸಲು ಆಗ್ರಹ

              
                  ತಿರುವನಂತಪುರ: ಕಾರು ಅಪಘಾತದಲ್ಲಿ ಪತ್ರಕರ್ತನ ಸಾವು ಪ್ರಕರಣದ ಆರೋಪಿ ಶ್ರೀರಾಮ್ ವೆಂಕಟರಾಮನ್ ವಿರುದ್ಧದ ದೂರನ್ನು ಕೇಂದ್ರ ಜಾಗೃತ ಆಯೋಗ ಸ್ವೀಕರಿಸಿದೆ.
         ಎಲ್‍ಜೆಡಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಲೀಂ ಮಡವೂರು ಶ್ರೀರಾಮ್  ವಿರುದ್ಧ ದೂರು ದಾಖಲಿಸಿದ್ದರು. ಶ್ರೀರಾಮ್ ವೆಂಕಟರಾಮ್ ಅವರನ್ನು ನಾಗರಿಕ ಸೇವೆಯಿಂದ ವಜಾಗೊಳಿಸಬೇಕು ಎಂಬುದು ದೂರಿನ ಪ್ರಮುಖ ಬೇಡಿಕೆಯಾಗಿದೆ.
           ಇತ್ತೀಚೆಗμÉ್ಟೀ ಅಲಪ್ಪುಳ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಶ್ರೀರಾಮ್ ವಿರುದ್ಧ ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಸಿಪಿಎಂ ಜೊತೆ ನಿಕಟ ಸಂಬಂಧ ಹೊಂದಿದ್ದ ಕೇರಳ ಮುಸ್ಲಿಂ ಜಮಾತ್ ಮತ್ತು ಎಪಿ ಸುನ್ನಿ ಪಂಗಡದ ಕೂಲಿ ಮುಷ್ಟಿಗೆ ಸÀರ್ಕಾರ ಮಣಿದು ಕೆಲವೇ ದಿನಗಳಲ್ಲಿ ಶ್ರೀರಾಮ್ ಅವರನ್ನು ಬೇರೆ ಹುದ್ದೆಗೆ ವರ್ಗಾಯಿಸಿತು. ಮುಸ್ಲಿಂ ಸಂಘಟನೆಗಳ ಪ್ರತಿಭಟನೆಗೆ ಮಣಿದ ಸರ್ಕಾರದ ನಿಲುವು ತೀವ್ರ ಟೀಕೆಗೂ ಕಾರಣವಾಗಿತ್ತು.
            ಸಲೀಂ ಮಡವೂರು ನೀಡಿರುವ ದೂರಿನಲ್ಲಿ ಶ್ರೀರಾಮ್ ಅವರು ಕಾರು ಅಪಘಾತ ಪ್ರಕರಣದಲ್ಲಿ ಅಧಿಕಾರ ದುರುಪಯೋಗ ಹಾಗೂ ಸಾಕ್ಷ್ಯ ನಾಶದ ಅಪರಾಧಗಳನ್ನು ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಆದ್ದರಿಂದ ಶ್ರೀರಾಮ್ ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಕೇಂದ್ರ ಸಿಬ್ಬಂದಿ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಲಾಗಿದೆ.
            ಕ್ರಿಮಿನಲ್ ಪ್ರಕರಣದಲ್ಲಿ ಆರೋಪಿಯಾಗಿರುವಾಗಲೇ ಜಂಟಿ ಕಾರ್ಯದರ್ಶಿ ಹುದ್ದೆಗೆ ಬಡ್ತಿ ನೀಡಿರುವುದು ಕಾನೂನು ಬಾಹಿರವಾಗಿದ್ದು, ಅದನ್ನು ರದ್ದುಗೊಳಿಸಬೇಕು ಎಂದು ದೂರಿನಲ್ಲಿ ಕೋರಲಾಗಿದೆ. ದೂರಿನಲ್ಲಿ ತಿಳಿಸಿರುವ ವಿಚಾರಗಳು ಆಯೋಗದ ಪರಿಗಣನೆಗೆ ಒಳಪಟ್ಟಿರುವುದರಿಂದ ಕಡತದಲ್ಲಿ ಸ್ವೀಕರಿಸಲಾಗಿದೆ ಎಂದು ಕೇಂದ್ರ ಜಾಗೃತ ಆಯೋಗ ಸ್ಪಷ್ಟಪಡಿಸಿದೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries