HEALTH TIPS

ರಸ್ತೆಯಲ್ಲಿ ಗುಂಡಿ; ಅಧಿಕಾರಿಗಳು ಕರೆದರೆ ನ್ಯಾಯಾಲಯದಲ್ಲೇ ಪಿಡಬ್ಲ್ಯುಡಿ ಕಚೇರಿ ತೆರೆಯಬೇಕಾಗುತ್ತದೆ: ಲೇವಡಿಗೈದ ಮುಖ್ಯ ನ್ಯಾಯಾಧೀಶ


               ಕೊಚ್ಚಿ: ರಸ್ತೆಯಲ್ಲಿನ ಗುಂಡಿಗಳಿಗೆ ಸಂಬಂಧಿಸಿದಂತೆ ಸರ್ಕಾರದ ಎಲ್ಲ ಸಮರ್ಥನೆಗಳನ್ನು ಕೇರಳ ಹೈಕೋರ್ಟ್ ತಿರಸ್ಕರಿಸಿದೆ.
           ಕಿಫ್ಬಿ ಸೂಚನೆಯಿಂದ ದುರಸ್ತಿ ಕಾರ್ಯ ನಡೆದಿಲ್ಲ ಎಂಬ ಎಂಜಿನಿಯರ್‍ಗಳ ಸಮರ್ಥನೆಯನ್ನು ಹೈಕೋರ್ಟ್ ಟೀಕಿಸಿದೆ. ಅಂತಹ ಸಲಹೆಯು ಕೊಲೆಗೆ ಅನುಮತಿ ಅಲ್ಲವೇ ಎಂದು ನ್ಯಾಯಾಲಯ ಕೇಳಿದೆ.
         ರಸ್ತೆ ಗುಂಡಿಗಳನ್ನು ಸರಕಾರ ಸಮರ್ಥಿಸಿಕೊಳ್ಳಬಾರದು. ವೈಫಲ್ಯಗಳಿಗೆ ಜನರನ್ನು ದೂಷಿಸಬೇಡಿ. ರಸ್ತೆಗಿಳಿದ ಬಳಿಕ ಜೀವಂತವಾಗಿ ಮರಳುತ್ತೇವೆಯೋ ಎಂದು ತಿಳಿಯದ ಸ್ಥಿತಿಯಲ್ಲಿ ರಾಜ್ಯ ಇದೆ. ರಾಜ್ಯದ ರಸ್ತೆಗಳಲ್ಲಿ ವಾಹನ ಚಲಾಯಿಸುವುದು ಅದೃಷ್ಟ ಪರೀಕ್ಷೆ. ರಸ್ತೆಯಿಂದ ಇಳಿದವರು ಮತ್ತೆ ಶವಪೆಟ್ಟಿಗೆಗೆ ಹೋಗಬೇಕಾಗುವ ಸ್ಥಿತಿ ಇದೆ ಎಂದು ನ್ಯಾಯಾಲಯ ಹೇಳಿದೆ.
         ಆಲುವಾ-ಪೆರುಂಬವೂರು ರಸ್ತೆಯ ದುರಸ್ತಿಯನ್ನು ಹತ್ತು ದಿನಗಳಲ್ಲಿ ಪೂರ್ಣಗೊಳಿಸುವಂತೆ ನ್ಯಾಯಾಲಯ ಸೂಚಿಸಿದೆ. ಕರ್ತವ್ಯಲೋಪ ಎಸಗುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.  ಹೊಂಡಗಳ ಉಸ್ತುವಾರಿ ಹೊತ್ತಿರುವ ಅಧಿಕಾರಿಗಳನ್ನು ಕರೆದರೆ ಹೈಕೋರ್ಟ್ ನಲ್ಲಿ ಪಿಡಬ್ಲ್ಯುಡಿ ಕಚೇರಿ ತೆರೆಯಬೇಕಾಗುತ್ತದೆ ಎಂದು ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಲೇವಡಿ ಮಾಡಿದರು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries