HEALTH TIPS

ಆರ್.ಎಸ್.ಎಸ್. ಸರಸಂಘಚಾಲಕ್ ಮೋಹನ್ ಭಾಗವತ್ ರಾಜ್ಯ ಕಚೇರಿಗೆ ಭೇಟಿ


               ಕೊಚ್ಚಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘÀಚಾಲಕ್ ಡಾ.ಮೋಹನ್ ಭಾಗವತ್ ತಮ್ಮ ನಾಲ್ಕು ದಿನಗಳ ಸಾಂಸ್ಥಿಕ ಪ್ರವಾಸದ ಅಂಗವಾಗಿ ರಾಜ್ಯ ಕಚೇರಿಗೆ ಭೇಟಿ ನೀಡಿದರು.
          ಅವರು ಎಳಮಕರದ ಮಾಧವನಿವಾಸವನ್ನು ತಲುಪಿದರು ಮತ್ತು ಸಂಘದ ಹಿರಿಯ ಪ್ರಚಾರಕರಾದ ರಂಗ ಹರಿ, ಎಂಎ ಕೃಷ್ಣನ್ ಮತ್ತು ಇತರರನ್ನು ಭೇಟಿ ಮಾಡಿದರು.
           ಕೊಲ್ಲಂ ವಲ್ಲಿಕಾವ್ ಅಮೃತಪುರಿ ಆಶ್ರಮವನ್ನು ತಲುಪಿದ ಮೋಹನ್‍ಜಿ, ಮಾತಾ ಅಮೃತಾನಂದಮಯಿ ದೇವಿಯನ್ನು ನಿನ್ನೆ ಭೇಟಿಯಾದ ನಂತರ ರಾತ್ರಿ ರಾಜ್ಯ ಕಚೇರಿಗೆ ತಲುಪಿದರು. ನಂತರದ ಸಭೆಯಲ್ಲಿ ಕೇರಳದ ಹಿರಿಯ ಪ್ರಚಾರಕರು ಹಾಗೂ ಗುಂಪಿನ ಉಸ್ತುವಾರಿಗಳಾದ ಟಿ.ಆರ್. ಸೋಮಶೇಖರನ್, ಕೆ.ಆರ್. ಉಮಾಕಾಂತನ್, ಕೆ. ಪುರುμÉೂೀತ್ತಮನ್ ಮತ್ತಿತರರೊಂದಿಗೆ ಸೌಹಾರ್ದ ಮಾತುಕತೆಯನ್ನೂ ನಡೆಸಿದರು.
             ಮೋಹನ್ ಭಾಗವತ್ ಅವರೊಂದಿಗೆ ಆರ್‍ಎಸ್‍ಎಸ್ ಕ್ಷೇತ್ರೀಯ ಪ್ರಚಾರಕ್ ಎ. ಸೆಂಥಿಲ್‍ಕುಮಾರ್, ಕ್ಷೇತ್ರೀಯ ಸಹ ಕಾರ್ಯವಾಹ ಎಂ. ರಾಧಾಕೃಷ್ಣನ್, ವಿಶೇಷ ಸಂಪರ್ಕ ಎ. ಜಯಕುಮಾರ್, ಸೀಮಾಜಾಗರಣ್ ಮಂಚ್ ರಾಷ್ಟ್ರೀಯ ಸಂಯೋಜಕ ಎ. ಗೋಪಾಲಕೃಷ್ಣನ್, ಪ್ರಾಂತ ಪ್ರಚಾರಕ ಎಸ್. ಸುದರ್ಶನನ್ ಮತ್ತಿತರರು ಇದ್ದರು. ರಾಜ್ಯ ಕಚೇರಿಯಲ್ಲಿ ವಿಶ್ರಾಂತಿ ಪಡೆದ ನಂತರ ಅವರು ನಿರ್ಧರಿಸಿದ ಸಾಂಸ್ಥಿಕ ಪ್ರವಾಸಕ್ಕಾಗಿ ತ್ರಿಶೂರ್‍ಗೆ ತೆರಳಿದರು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries