HEALTH TIPS

ಮರವೇರಿ ಕುಳಿತು ಸ್ವತಃ ತನ್ನನ್ನು ತಾನೇ ಸರಪಳಿಯಲ್ಲಿ ಬಂಧಿಸಿ ವಿಶಿಷ್ಟ ಪ್ರತಿಭಟನೆ: ಬೀದಿನಾಯಿ ಕಿರುಕುಳದ ವಿರುದ್ಧ ಪ್ರತಿಭಟನೆ


             ಕಣ್ಣೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ ಖಂಡಿಸಿ ಕಣ್ಣೂರಿನಲ್ಲಿ ವಿಶಿಷ್ಟ ಪ್ರತಿಭಟನೆ ನಡೆಸಲಾಗುತ್ತಿದೆ. ಪ್ರತಿಭಟನಾಕಾರ ಕಲೆಕ್ಟರೇಟ್ ಮುಂಭಾಗದ ಮರವೇರಿ ಸ್ವತಃ ಸರಪಳಿ ಕಟ್ಟಿ ವಿಶಿಷ್ಟ ಪ್ರತಿಭಟನೆ ನಡೆಸಿದ.
         ಸುರೇಂದ್ರನ್ ಕುಕನಾತಿಲ್ ಏಕವ್ಯಕ್ತಿ ಪ್ರತಿಭಟನೆ ನಡೆಸಿದವರು.  ಸುರೇಂದ್ರನ್ ಫುಟ್‍ಪಾತ್ ಬಳಿಯ ಮರ ಹತ್ತಿ ತನ್ನನ್ನು ಸ್ವತಃ ಸಂಕೊಲೆಗಳಿಂದ ಕಟ್ಟಿಕೊಂಡಿದ್ದಾನೆ. ಬೀದಿ ನಾಯಿಗಳ ಹಾವಳಿ ಹಾಗೂ ಸರ್ಕಾರ ಶಾಶ್ವತ ಕ್ರಮಕೈಗೊಳ್ಳದಿರುವುದು ಖಂಡಿಸಿ ಕ್ರಮ ಕೈಗೊಳ್ಳಲು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಲಾಯಿತು.
        ಕಣ್ಣೂರಿನಲ್ಲಿ 14 ದಿನಗಳಲ್ಲಿ ಬೀದಿನಾಯಿ ದಾಳಿಯಿಂದ 370 ಮಂದಿ ಗಾಯಗೊಂಡು ಚಿಕಿತ್ಸೆ ಪಡೆದಿದ್ದಾರೆ. ರೇಬಿಸ್ ಸೋಂಕಿತ ಹಸುವಿಗೆ ದಯಾಮರಣ ನೀಡಲು ನಿರ್ಧರಿಸಲಾಗಿದೆ.  ಕಣ್ಣೂರಿನ ಚಿಟಾರಿಪರಂಬ್ ನಿವಾಸಿ ಅರವಿಂದಾಕ್ಷನ್ ಅವರ ಹಸು ರೇಬಿಸ್‍ನಿಂದ ಸಾವನ್ನಪ್ಪಿದೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries