ಕೊಚ್ಚಿ: ಇಸ್ಲಾಮಿಕ್ ಉಗ್ರ ಧಾರ್ಮಿಕ ಸಂಘಟನೆ ಪಾಪ್ಯುಲರ್ ಫ್ರಂಟ್ ಗೆ ತರಬೇತಿ ನೀಡಿದ್ದಕ್ಕಾಗಿ ಅಮಾನತುಗೊಂಡಿದ್ದ ಅಗ್ನಿಶಾಮಕ ದಳದ ಅಧಿಕಾರಿಯನ್ನು ಮರುಸೇರ್ಪಡೆ ಮಾಡಲಾಗಿದೆ.
ಎರ್ನಾಕುಳಂ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಎಎಸ್ ಜೋಗಿ ಅವರನ್ನು ಸೇವೆಗೆ ಮರುಸೇರ್ಪಡೆಸಲಾಗಿದೆ. ರಾಜ್ಯ ಆಡಳಿತ ನ್ಯಾಯಮಂಡಳಿಯ ಸೂಚನೆ ಮೇರೆಗೆ ಅವರನ್ನು ವಾಪಸ್ ತೆಗೆದುಕೊಳ್ಳಲಾಗಿದೆ ಎಂದು ಗೃಹ ಇಲಾಖೆ ತಿಳಿಸಿದೆ.
ಮಾರ್ಚ್ 30ರಂದು ಈ ವಿವಾದಾತ್ಮಕ ಘಟನೆ ನಡೆದಿತ್ತು. ಆಲುವಾ ಪುರಭವನದಲ್ಲಿ ಪಾಪ್ಯುಲರ್ ಫ್ರಂಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಗ್ನಿಶಾಮಕ ದಳದ ಅಧಿಕಾರಿಗಳು ಸಂಘಟನೆಯ ಕಾರ್ಯಕರ್ತರಿಗೆ ತರಬೇತಿ ನೀಡಿದ್ದರು. ಘಟನೆ ಬಯಲಾಗುತ್ತಿರುವಂತೆ ಬಿಜೆಪಿ ಸೇರಿದಂತೆ ಪಕ್ಷಗಳು ರಂಗಕ್ಕೆ ಬಂದವು. ಉಗ್ರಗಾಮಿ ಸಂಘಟನೆಯ ಕಾರ್ಯಕರ್ತರಿಗೆ ಅಗ್ನಿಶಾಮಕ ದಳ ತರಬೇತಿ ನೀಡಿರುವುದು ಕಾನೂನು ಬಾಹಿರ ಎಂದು ಪ್ರತಿಭಟನಾಕಾರರು ಗಮನ ಸೆಳೆದರು. ಇದರೊಂದಿಗೆ ಅಗ್ನಿಶಾಮಕ ದಳದ ಮುಖ್ಯಸ್ಥ ಬಿ. ಸಂಧ್ಯಾ ಅಮಾನತಿಗೆ ಆದೇಶಿಸಿದ್ದರು.
ತನಿಖೆಯ ಆಧಾರದ ಮೇಲೆ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಕೆ.ಕೆ.ಶೈಜು ಮತ್ತು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಜೆ.ಎಸ್.ಜೋಗಿ ಅವರನ್ನು ಅಮಾನತುಗೊಳಿಸಲಾಗಿತ್ತು. ತರಬೇತಿ ಪಡೆದಿದ್ದ ಬಿ.ಅನೀಶ್, ವೈ.ಎ.ರಾಹುಲ್ದಾಸ್, ಎಂ.ಸಜ್ಜದ್ ಅವರನ್ನೂ ವರ್ಗಾವಣೆ ಮಾಡಲಾಗಿದೆ. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಧಾರ್ಮಿಕ ಹಾಗೂ ರಾಜಕೀಯ ಸಂಘಟನೆಗಳಿಗೆ ತರಬೇತಿ ನೀಡುವುದನ್ನು ನಿμÉೀಧಿಸಿ ಅಗ್ನಿಶಾಮಕ ದಳದ ಮುಖ್ಯಸ್ಥರು ಸುತ್ತೋಲೆ ಹೊರಡಿಸಿದ್ದಾರೆ.
ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರಿಗೆ ತರಬೇತಿ ನೀಡಿದ್ದಕ್ಕೆ ಅಮಾನತುಗೊಂಡಿದ್ದ ಅಗ್ನಿಶಾಮಕ ದಳದ ಅಧಿಕಾರಿ ಸೇವೆಗೆ ಮರುಸೇರ್ಪಡೆ
0
September 18, 2022