HEALTH TIPS

ದೇಶದ ವಿರುದ್ಧದ ಹೇಳಿಕೆಗಳಿಂದ ನೋವಾಗುತ್ತದೆ: ಉಪರಾಷ್ಟ್ರಪತಿ ಜಗದೀಪ್‌ ಧನಕರ್‌

 

          ನವದೆಹಲಿ : ವಾಸ್ತವಕ್ಕೆ ದೂರವಾಗಿರುವ ಭಾರತದ ವಿರುದ್ಧದ ಹೇಳಿಕೆಗಳನ್ನು ಕೇಳುವಾಗ ತೀರಾ ನೋವಾಗುತ್ತದೆ ಎಂದು ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಅವರು ಮಂಗಳವಾರ ಹೇಳಿದರು.

             ಅಖಿಲ ಭಾರತ ಮ್ಯಾನೇಜ್‌ಮೆಂಟ್‌ ಅಸೋಸಿಯೇಷನ್‌ನ (ಎಐಎಂಎ) 49ನೇ ರಾಷ್ಟ್ರೀಯ ನಿರ್ವಹಣಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಕೋವಿಡ್‌-19 ಸಾಂಕ್ರಾಮಿಕದೊಂದಿಗೆ ಹೋರಾಡುತ್ತಲೇ ಸರ್ಕಾರ ಸಾಧಿಸಿದ ಸಾಧನೆಗಳನ್ನು ಸ್ಮರಿಸಿದರು.

                 'ಕೋವಿಡ್‌ ಸಾಂಕ್ರಾಮಿಕ ಭಾರತದ ಶಕ್ತಿ ಏನೆಂದು ಪ್ರತಿಯೊಬ್ಬರಿಗೂ ಮನವರಿಕೆ ಮಾಡಿಕೊಟ್ಟಿದೆ. ಭಾರತ ಹಿಂದೆಂದೂ ಈಗಿನಂತೆ ಜಾಗತಿಕವಾಗಿ ಗಮನ ಸೆಳೆದಿರಲಿಲ್ಲ. ಭಾರತದ ಪ್ರಧಾನಿ ಹೊಂದಿರುವ ವರ್ಚಸ್ಸು, ವಿದೇಶಾಂಗ ಸಚಿವರ ವರ್ಚಸ್ಸು, ವಿದೇಶದಲ್ಲಿ ಪ್ರತಿಯೊಬ್ಬ ಭಾರತೀಯನ ವರ್ಚಸ್ಸು ವಿಭಿನ್ನವಾಗಿರುವುದು ಹೆಮ್ಮೆಯ ಸಂಗತಿ' ಎಂದು ಅವರು ಹೇಳಿದರು.

                 ಇದೇ ವೇಳೆ ಹಲವು ಅಡೆತಡೆಗಳ ನಡುವೆಯೂ ಲಸಿಕಾಕರಣಕ್ಕೆ ಉತ್ತೇಜನ ನೀಡುತ್ತಿರುವ ಸರ್ಕಾರದ ಕ್ರಮಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries