HEALTH TIPS

ಪ್ರಜಾಪ್ರಭುತ್ವ ಮತ್ತು ರಾಜಕೀಯ ವ್ಯವಸ್ಥೆಯ ಅಣಕ: ಸತ್ತ ನಾಯಿ ವಿಚಾರವಾಗಿ ಯುಡಿಎಫ್ ಮತ್ತು ಎಲ್ ಡಿಎಫ್ ನಡುವೆ ವಾಗ್ವಾದ; ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿ ಮಧ್ಯಸ್ಥಿಕೆ; ರಾಜಕೀಯ ವಿಷಯವಾದ ನಾಯಿ!


          ಮಲಪ್ಪುರಂ: ಸತ್ತ ನಾಯಿಯನ್ನು ಹೂಳುವ ವಿಚಾರದಲ್ಲಿ ಯುಡಿಎಫ್ ಮತ್ತು ಎಲ್ ಡಿಎಫ್ ಪಂಚಾಯಣi ಸದಸ್ಯರ ನಡುವೆ ವಾಗ್ವಾದ ನಡೆದ ಘಟನೆ ಅಚ್ಚರಿಯೆಂಬಂತೆ ವರದಿಯಾಗಿದೆ. ಮಲಪ್ಪುರಂನ ಎರನಾಡಿನ ಚಾಲಿಯಾರ್ ಪಂಚಾಯತ್ ನ ಇಡಿವಣ್ಣ ಎಂಬಲ್ಲಿ ಈ ಘಟನೆ ನಡೆದಿದೆ.
           ಮಂಗಳವಾರ ಬೆಳಗ್ಗೆ ಇಡಿವಣ್ಣಾದಲ್ಲಿ ಸತ್ತ ಬೀದಿನಾಯಿ ಪತ್ತೆಯಾಗಿತ್ತು. ನಾಯಿಯನ್ನು ಹೂಳಲು ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಎರಡನೇ ವಾರ್ಡಿನ ಸದಸ್ಯರಿಗೆ ಕರೆ ಮಾಡಿದಾಗ, ಮೂರನೇ ವಾರ್ಡ್‍ನಲ್ಲಿ ನಾಯಿ ಸತ್ತಿದೆ ಎಂದು ಸದಸ್ಯರು ಉತ್ತರಿಸಿದರು. ಮೂರನೇ ವಾರ್ಡ್ ಸದಸ್ಯೆ ಘಟನೆ ಕುರಿತು ಪ್ರತಿಕ್ರಿಯಿಸಲು ಇಚ್ಛಿಸಲಿಲ್ಲ. ಬೀದಿನಾಯಿಯನ್ನು ಹೂಳುವವರಿಗೆ 400 ರೂಪಾಯಿ ಬಹುಮಾನ ನೀಡುವುದಾಗಿ ಮುಖಂಡರು ಭರವಸೆ ನೀಡಿದ್ದರು.ಆದರೆ ಆಧಾರ್ ಕಾರ್ಡ್ ನಕಲು ಬೇಕು, ಹಣ ನೀಡಲು ವಿಳಂಬವಾಗುತ್ತದೆ ಎಂಬ ಮಾತು ಕೇಳಿ ಕಾರ್ಮಿಕರು ಹಿಂದೆ ಸರಿದಿದ್ದಾರೆ.
           ಇದರೊಂದಿಗೆ ಯುಡಿಎಫ್ ಪ್ರತಿನಿಧಿಗಳು ಮತ್ತು ಎಲ್ ಡಿಎಫ್ ಪ್ರತಿನಿಧಿಗಳು ಪರಸ್ಪರ ಆರೋಪ-ಪ್ರತ್ಯಾರೋಪಕ್ಕೆ ಮುಂದಾದರು. ಸತ್ತುಬಿದ್ದಿರುವ ಭಾಗ ಎರಡನೇ ವಾರ್ಡ್ ಮತ್ತು ಮೂರನೇ ವಾರ್ಡ್ ಎಂಬ ಬಗ್ಗೆ ಭಾರೀ ಆರೋಪ ಪ್ರತ್ಯಾರೋಪ ನಡೆಯಿತು. ಒಂದು ವಾರ್ಡ್ ನ ಸದಸ್ಯ ಯುಡಿಎಫ್ ಮತ್ತು ಪಕ್ಕದ ಇನ್ನೊಂದು ವಾರ್ಡ್ ಸದಸ್ಯೆ ಎಲ್ ಡಿಎಫ್ ಇರುವುದರಿಂದ ಸಮಸ್ಯೆ ಉಲ್ಬಣಗೊಂಡಿದೆ. ಇದೇ ವೇಳೆ ಸ್ಥಳೀಯರು ಘಟನೆ ಕುರಿತು ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದರು.
         ಈ ವೇಳೆ ಜಿಲ್ಲಾಧಿಕಾರಿ ಮಧ್ಯ ಪ್ರವೇಶಿಸಿದ ಬಳಿಕ ಎಚ್ಚೆತ್ತುಕೊಂಡ ಪಂಚಾಯಿತಿ ಅಧಿಕಾರಿಗಳು ಕಾರ್ಯಪ್ರವೃತ್ತರಾದರು. ನಾಯಿಯನ್ನು ಹೂಳಲು ಬಂದವರಿಗೆ ತಕ್ಷಣವೇ 500 ರೂ.ಕೊಡಲು ಪಂಚಾಯಿತಿ ಅಧಿಕಾರಿಗಳು ಒಪ್ಪಿದರು. ಇದರೊಂದಿಗೆ ನಾಯಿಯನ್ನು ಸಮಾಧಿ ಮಾಡಿ ಸಮಸ್ಯೆ ಬಗೆಹರಿದಿದೆ. ಬೆಳಗ್ಗೆಯಿಂದ ಆರಂಭವಾದ ನಾಯಿ ಸಮಸ್ಯೆ ಸಂಜೆ 4ರ ವೇಳೆಗೆ ಬಗೆಹರಿದಿದ್ದರಿಂದ ಸ್ಥಳೀಯರು ಕೂಡ ನಿರಾಳರಾಗಿ ಹಿಂತಿರುಗಿದರು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries