ಬದಿಯಡ್ಕ: ಕನ್ನಪ್ಪಾಡಿಯಲ್ಲಿ ಕೊಡ್ಯಮ್ಮೆ ಅಂತಲ ಮೊಗೇರ ಚಾವಡಿಯ ದಾರಂದ ಮುಹೂರ್ತ ಕಾರ್ಯಕ್ರಮ ಜರಗಿತು. ದೈವಜ್ಞ ಮೋಹನ್ ಮಾಯಿಪ್ಪಾಡಿ ಅವರ ನಿರ್ದೇಶನದಂತೆ ನಡೆದ ಕಾರ್ಯಕ್ರಮದಲ್ಲಿ ಚಾವಡಿಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಲಕ್ಷ್ಮಣ ಐ ಪೆರಿಯಡ್ಕ, ಚಿದಾನಂದ ಆಳ್ವ, ಎಸ್.ನಾರಾಯಣ,ಕೃಷ್ಣ ಕೆ.ಕೆ, ಗುರುವಪ್ಪ ಕೆ, ಸತೀಶ ಮಾಡತ್ತಡ್ಕ, ವಸಂತ ಕೆ,ಪ್ರಜೇಶ್ ಕಂಗಿಲಗುತ್ತು ಮೊದಲಾದವರು ಭಾಗವಹಿಸಿದ್ದರು. ಚಾವಡಿಯ ಜೀರ್ಣೋದ್ಧಾರ ಕಾರ್ಯಕ್ಕೆ ಆರ್ಥಿಕ ಸಹಾಯಕವಾಗಿ ಲಕ್ಕಿ ಕೂಪನ್ ಆಯೋಜಿಸಲು ಸಮಿತಿ ಸಭೆ ನಿರ್ಧರಿಸಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.
ಕೊಡ್ಯಮ್ಮೆ ಅಂತಲ ಮೊಗೇರ ಚಾವಡಿ ನಿರ್ಮಾಣದ ದಾರಂದ ಮುಹೂರ್ತ
0
September 15, 2022