ತ್ರಿಶೂರ್: ಕಕ್ಕಾಡ್ ಮನೆಯ ಕಿರಣ್ ಆನಂದ ನಂಬೂದಿರಿ ಅವರು ಗುರುವಾಯೂರಿನ ನೂತನ ಮೇಲ್ಶಾಂತಿಯಾಗಿ ನಿಯುಕ್ತರಾಗಿದ್ದಾರೆ. ಚೀಟಿ ಮೇಲೆತ್ತುವ ಮೂಲಕ ಅವರನ್ನು ಮುಖ್ಯ ಶಾಂತಿಪಾಲಕರನ್ನಾಗಿ ಆಯ್ಕೆ ಮಾಡಲಾಯಿತು.
ಕಿರಣ್ ಆನಂದ್ ನಂಬೂದಿರಿ ಗುರುವಾಯೂರು ಮೇಲ್ಶಾಂತಿಯಾಗುತ್ತಿರುವುದು ಇದೇ ಮೊದಲು. ತಿಯ್ಯನೂರು ಕೃಷ್ಣಚಂದ್ರನ್ ಅವರು ಪ್ರಸ್ತುತ ಮೇಲ್ಶಾಂತಿಯಾಗಿದ್ದಾರೆ.
ಮಧ್ಯಾಹ್ನದ ಪೂಜೆಯ ನಂತರ ಡ್ರಾ ನಡೆಯಿತು. ಪ್ರಸ್ತುತ ಮೇಲ್ಶಾಂತಿಯವರು ಡ್ರಾ ಮಾಡಿಸಿದ್ದಾರೆ. ಸಭೆಯಲ್ಲಿ ಅರ್ಹತೆ ಪಡೆದವರ ಹೆಸರನ್ನು ಡ್ರಾಗೆ ಪರಿಗಣಿಸಲಾಗಿತ್ತು. 39 ಹೆಸರುಗಳನ್ನು ಚೀಟಿ ಎತ್ತಲಾಗಿದೆ. ಇದರಲ್ಲಿ ಕಿರಣ್ ಆನಂದ್ ನಂಬೂತಿದಿರಿಗೆ ಸ್ಥಾನ ಒಲಿದುಬಂದಿದೆ.
ಇದೇ 30ರಂದು ಮೇಲ್ಶಾಂತಿಯಾಗಿ ಜವಾಬ್ದಾರಿಗೆ ತೊಡಗಿಸಿಕೊಳ್ಳುವರು. ಇದಕ್ಕೂ ಮುನ್ನ 12 ದಿನಗಳ ಕಾಲ ದೇವಸ್ಥಾನದಲ್ಲಿ ಧ್ಯಾನ-ಭಜನೆ ನಿರ್ವಹಿಸಲಿದ್ದಾರೆ. ಅವರ ಅಧಿಕಾರಾವಧಿ ಆರು ತಿಂಗಳುಗಳ ಕಾಲ ಇರಲಿದೆ.
ಗುರುವಾಯೂರ್ ಮೇಲ್ಶಾಂತಿಯಾಗಿ ಕಕ್ಕಾಡ್ ಕಿರಣ್ ಆನಂದ್ ನಂಬೂದಿರಿ ಆಯ್ಕೆ
0
September 17, 2022