ವಯನಾಡ್: ಅಡ್ವ. ಶ್ರೀಜಿತ್ ಪೆರುಮಾನ ಅವರು ಮಾತಾ ಅಮೃತಾನಂದಮಯಿ ಹಾಗೂ ಮೃತರಾದ ಅವರ ತಾಯಿ ದಮಯಂತಿಯಮ್ಮ ಅವರನ್ನು ಮಾನಹಾನಿಗೈದ ಘಟನೆ ನಡೆದಿದೆ.
ಫೇಸ್ ಬುಕ್ ಪೋಸ್ಟ್ ಮೂಲಕ ಅವರನ್ನು ಅವಮಾನಿಸಿದ್ದಾರೆ. ಸರ್ಕಾರಿ ಗೆಜೆಟ್ ಮೂಲಕ ಹೆಸರು ಪ್ರಕಟಿಸಿದ ಮೊದಲಿಗರು ಎಂದು ಪೆರುಮನ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಸಾವಿನಲ್ಲಿಯೂ ಸಂತಸಪಡುವ, ಆನಂದ ಕಾಣುವ ಪೆರುಮಾನ ಅವರ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಜನ ಪ್ರತಿಕ್ರಿಯಿಸುತ್ತಾರೆ. ಅವರು ಹಿಂದೂ ಮಠಗಳನ್ನು ಅವಮಾನಿಸುವ ಮತ್ತು ಮುಸ್ಲಿಂ ಉಗ್ರಗಾಮಿಗಳ ಪರ ವಕಾಲತ್ತು ವಹಿಸುವ ವ್ಯಕ್ತಿ. ಪೆರುಮಾನ ಅವರ ಫೇಸ್ ಬುಕ್ ಪುಟದ ಮುಖಪುಟ ಚಿತ್ರ ಅಬ್ದುನಾಸರ್ ಮದನಿ ಅವರೊಂದಿಗಿನ ಚಿತ್ರವಾಗಿದೆ.
'ಸರ್ಕಾರಿ ಗೆಜೆಟ್ ಮೂಲಕ ತನ್ನದೇ ಹೆಸರನ್ನು ದೇವರ ಹೆಸರಾಗಿ ಪ್ರಕಟಿಸಿದ ಮೊದಲ ವ್ಯಕ್ತಿಯ ತಾಯಿಯ ನಿಧನಕ್ಕೆ ಸಂತಾಪಗಳು. ವಿಶ್ವದ ಅತಿ ಹೆಚ್ಚು ತೆರಿಗೆ ಪಾವತಿಸುವ ಮಹಿಳೆಯ ತಾಯಿಯ ನಿಧನಕ್ಕೆ ಭಾಷ್ಪಾಂಜಲಿ ಎಂದು ಅಡ್ವ. ಶ್ರೀಜಿತ್ ಪೆರುಮಾನ ಅವರು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮಾತಾ ಅಮೃತಾನಂದಮಯಿ ದೇವಿಯ ತಾಯಿ ದಮಯಂತಿಯಮ್ಮ ಮೊನ್ನೆ ವಿಧಿವಶರಾಗಿದ್ದಾರೆ. ವೃದ್ಧಾಪ್ಯ ಸಂಬಂಧಿ ಕಾಯಿಲೆಗಳಿಂದ ಅವರು ಅಮೃತಪುರಿಯಲ್ಲಿರುವ ತಮ್ಮ ಮನೆಯಲ್ಲಿ ನಿಧನರಾದರು. ಅಪಾರ ಜನರ ಸಮ್ಮುಖದಲ್ಲಿ ಅಮೃತಪುರಿ ಆಶ್ರಮದ ಆವರಣದಲ್ಲಿ ದಮಯಂತಿಯಮ್ಮ ಅವರ ಅಂತ್ಯಕ್ರಿಯೆ ನೆರವೇರಿತು. ಅಂತಿಮ ನಮನ ಸಲ್ಲಿಸಲು ಸಾವಿರಾರು ಮಂದಿ ಆಗಮಿಸಿದ್ದರು. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಪಿಣರಾಯಿ ವಿಜಯನ್, ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಮತ್ತಿತರರು ಸಂತಾಪ ಸೂಚಿಸಿದ್ದಾರೆ.
'ಸರ್ಕಾರಿ ಗೆಜೆಟ್ ಮೂಲಕ ಹೆಸರು ಪ್ರಕಟಿಸಿದ ಮೊದಲ ಮಹಿಳೆಯ ತಾಯಿಯ ನಿಧನಕ್ಕೆ ಸಂತಾಪಗಳು'; ವಿವಾದಾತ್ಮಕ ಸಂದೇಶ ಪ್ರಕಟಿಸಿದ ಅಡ್ವ. ಶ್ರೀಜಿತ್ ಪೆರುಮಾನ
0
September 21, 2022