ಕಾಸರಗೋಡು: ವಿದ್ಯಾರಂಗ ಕಾಸರಗೋಡು ಉಪಜಿಲ್ಲಾ ಸಮಿತಿಯ ಕಲಾ ಸಹಿತ್ಯ ವೇದಿ ಕಾರ್ಯಕ್ರಮದ ಲಾಂಛನ ಬಿಡುಗಡೆ ಸಮಾರಂಭ ಕಾಸರಗೋಡು ಪ್ರೆಸ್ಕ್ಲಬ್ನಲ್ಲಿ ಜರುಗಿತು. ಕಾರಡ್ಕ ಬ್ಲಾಕ್ ಪಮಚಾಯಿತಿ ಅಧ್ಯಕ್ಷ ಸಿಜಿಮ್ಯಾಥ್ಯೂ ಪ್ರೆಸ್ಕ್ಲಬ್ ಅಧ್ಯಕ್ಷ ಮಹಮ್ಮದ್ ಹಾಶಿಂ ಅವರಿಗೆ ಲಾಂಛನ ಹಸ್ತಾಂತರಿಸುವ ಮೂಲಕ ಬಿಡುಗಡೆಗೊಳಿಸಿದರು.
ರಾಷ್ಟ್ರೀಯ ಅಧ್ಯಾಪಕ ಪ್ರಶಸ್ತಿ ವಿಜೇತ ಶಿಕ್ಷಕ, ಚಟ್ಟಂಚಾಲ್ ಶಾಲೆಯಿಂದ ನಿವೃತ್ತರಾದ ರತೀಶ್ ಮಾಸ್ಟರ್ ಲಾಂಛನಕ್ಕೆ ರೂಪು ನೀಡಿದ್ದಾರೆ. ಸೆ. 24ರಿಂದ ಇರಿಯಣ್ಣಿ ಸರ್ಕಾರಿ ವಒಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿದ್ಯಾರಂಗ ಕಾರ್ಯಕ್ರಮ ಜರುಗಲಿದೆ. ಖ್ಯಾಥ ಚಿತ್ರ ನಟ ಉಣ್ಣಿರಾಜ್ ಚೆರ್ವತ್ತೂರ್ ಸಮಾರಂಭ ಉದ್ಘಾಟಿಸುವರು.
ಉಪಜಿಲ್ಲಾ ವಿದ್ಯಾರಂಗ ಕಲಾ ಸಾಹಿತ್ಯ ವೇದಿ ಕಾರ್ಯಕ್ರಮ-ಲಾಂಛನ ಬಿಡುಗಡೆ
0
September 18, 2022
Tags