ಕಾಸರಗೋಡು: ರಾಷ್ಟ್ರೀಯ ಕಾರ್ಮಿಕ ದಿನಾಚರಣೆ, ವಿಶ್ವಕರ್ಮ ಜಯಂತಿ ಅಂಗವಾಗಿ ಬಿಎಂಎಸ್ ಕಾಸರಗೋಡು ವಲಯ ಸಮಿತಿ ವತಿಯಿಂದ ಬೃಹತ್ ಮೆರವಣಿಗೆ ಮತ್ತು ಸಆರ್ವಜನಿಕ ಸಭೆ ಕಾಸರಗೋಡಿನಲ್ಲಿ ಜರುಗಿತು.
ಬಿಎಂಎಸ್ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಸಿಬಿ ವರ್ಗೀಸ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕೇರಳದ ಎಡರಂಗ ಸರ್ಕಾರ ಕಾಂರ್ಇಕ ವಿರೋಧಿ ನೀತಿ ಅನುಸರಿಸುತ್ತಿದ್ದು, ರಆಜ್ಯದ ಕಾರ್ಮಿಕ ವರ್ಗ ಸಂಕಷ್ಟ ಅನುಭವಿಸಬೇಕಾಗಿದೆ. ಕೆಎಸ್ಸಾರ್ಟಿಸಿಯಲ್ಲಿ ಎಂಟು ತಾಸುಗಳ ಕೆಲಸ ಕಾಲವಧಿಯನ್ನು 12ತಾಸುಗಳಿಗೇರಿಸಿ ಇದನ್ನು ಕಾಯಂಗೊಳಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಈ ಮೂಲಕ ಕಾರ್ಮಿಕರನ್ನು ಸರ್ಕಾರ ವಂಚಿಸುತ್ತಿದೆ. ವೇತನ ಹಾಗೂ ಪಿಂಚಣಿಗಾಗಿ ಕಾರ್ಮಿಕರು ಇಂದು ಬೀದಿಗಿಳಿಯಬೇಕಾದ ಅನಿವಾರ್ಯತೆಯಿದೆ ಎಂದು ಟೀಕಿಸಿದರು.
ಸ್ವಾಗತ ಸಮಿತಿ ಅಧ್ಯಕ್ಷ ಸಿ.ವಿ ಪೊದುವಾಳ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪದಾಧಿಕಾರಿಗಳಾದ ಅನಿಲ್ ಬಿ.ನಾಯರ್, ಉಪೇಂದ್ರ ಕೋಟೆಕಣಿ, ಕಮಲಾಕ್ಷ, ಬಾಲಕೃಷ್ಣ, ಶಾಂತಾಕುಮಾರಿ ಜೆ.ಪಿ ನಗರ, ನಾರಾಯಣನ್ ಉಪಸ್ಥಿತರಿದ್ದರು. ಬಿಎಂಎಸ್ ಕಾಸರಗೋಉ ವಲಯ ಅಧ್ಯಕ್ಷ ರಿಜೇಶ್ ಸ್ವಾಗತಿಸಿದರು. ಚೆಂಗಳ ಗ್ರಾಪಂ ಸಮಿತಿ ಅಧ್ಯಕ್ಷ ಬಾಬು ಮೋನ್ ವಂಧಿಸಿದರು.
ಕಾಸರಗೋಡಿನಲ್ಲಿ ರಾಷ್ಟ್ರೀಯ ಕಾರ್ಮಿಕ ದಿನಾಚರಣೆ, ವಿಶ್ವಕರ್ಮ ಜಯಂತಿ
0
September 17, 2022
Tags