ತಿರುವನಂತಪುರ: ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ವಿರುದ್ಧ sಸಚಿವ ವಿ. ಶಿವಂಕುಟ್ಟಿ ರಾಜ್ಯಪಾಲರಿಗೆ ಜವಾಬ್ ನೀಡಿದ್ದು, ಸಾಂವಿಧಾನಿಕ ಬಾಧ್ಯತೆ ಪಾಲನೆ ಮಾಡುವ ಜವಾಬ್ದಾರಿ ರಾಜ್ಯಪಾಲರ ಮೇಲಿದೆ ಎಂದು ಸಚಿವರು ಹೇಳಿದರು.
ಆರೀಫ್ ಮೊಹಮ್ಮದ್ ಖಾನ್ ಅವರು ತಮ್ಮ ಜವಾಬ್ದಾರಿಯನ್ನು ಉಲ್ಲಂಘಿಸಿ ರಾಜಕೀಯ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬುದು ಸಚಿವ ಶಿವಂಕುಟ್ಟಿ ಅವರ ವಾದ.
ರಾಜ್ಯಪಾಲರು ಬಿಜೆಪಿಯ ವಕ್ತಾರರಾಗಿದ್ದಾರೆ. ಕೇರಳದಲ್ಲಿ ಎಡಪಂಥೀಯರನ್ನು ಅಸ್ಥಿರಗೊಳಿಸಲು ರಾಜ್ಯಪಾಲರು ಪ್ರಯತ್ನಿಸುತ್ತಿದ್ದಾರೆ. ಆರಿಫ್ ಮೊಹಮ್ಮದ್ ಖಾನ್ ಅವರು ಬಿಜೆಪಿ ಕ್ಷೇತ್ರಾಧ್ಯಕ್ಷ ಹುದ್ದೆಯನ್ನೂ ಅಲಂಕರಿಸಿದ್ದಾರೆ ಎಂದು ಶಿವಂ ಕುಟ್ಟಿ ಟೀಕಿಸಿದರು.
ಇಷ್ಟು ದಿನ ಮುಖ್ಯಮಂತ್ರಿ ಮೌನ ವಹಿಸಿದ್ದರು. ಪಿಣರಾಯಿ ವಿಜಯನ್ ಹೇಗಾದರೂ ಮಾಡಿ ರಾಜ್ಯಪಾಲರಿಗೆ ಸಹಕರಿಸಲು ಯತ್ನಿಸಿದರು. ರಾಜ್ಯಪಾಲರು ಮಸೂದೆಗೆ ಅಂಕಿತ ಹಾಕದಿದ್ದರೆ ನೋಡೋಣ ಎಂದು ಶಿವಂಕುಟ್ಟಿ ಹೇಳಿದರು. ಇದೇ ವೇಳೆ ರಾಜ್ಯಪಾಲರು ಮುಖ್ಯಮಂತ್ರಿ ಹಾಗೂ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಕಾನೂನಿಗೆ ವಿರುದ್ಧವಾದ ನಿರ್ಣಯಕ್ಕೂ ಸಹಿ ಹಾಕುವುದಿಲ್ಲ ಎಂದು ಅವರು ಹಠ ಹಿಡಿದಿದ್ದಾರೆ.
ಇಷ್ಟು ದಿನ ಮುಖ್ಯಮಂತ್ರಿ ಮೌನ ವಹಿಸಿದ್ದರು; ವಿ.ಶಿವಂಕುಟ್ಟಿ
0
September 17, 2022
Tags