HEALTH TIPS

ಪಾಪ್ಯುಲರ್ ಫ್ರಂಟ್‍ಗಳು ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿವೆ: ಸಾಕ್ಷ್ಯಾಧಾರಗಳ ಆಧಾರದಲ್ಲಿ ರಾಷ್ಟ್ರೀಯ ತನಿಖಾ ದಳದ ದಾಳಿ ಮತ್ತು ಬಂಧನ ನಡೆಸಿದೆ: ಎಂವಿ ಜಯರಾಜನ್


          ಕಣ್ಣೂರು: ಹರತಾಳದ ನೆಪದಲ್ಲಿ ಪಾಪ್ಯುಲರ್ ಫ್ರಂಟ್ ನಡೆಸಿದ ಹಿಂಸಾಚಾರವನ್ನು ಸಿಪಿಎಂ ಮುಖಂಡ ಎಂ.ವಿ.ಜಯರಾಜನ್ ಟೀಕಿಸಿದ್ದಾರೆ.
            ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಪಾಪ್ಯುಲರ್ ಫ್ರಂಟ್ ನ ಜನ ವಿರುದ್ದ ಧೋರಣೆ ಹಪರಬಿದ್ದಿದೆ.  ಹಿಂಸಾಚಾರವೇ ಅವರ ಕುಲ ಕಸುಬಾಗಿದ್ದು, ಕೊಲೆಗಡುಕ ರಾಜಕಾರಣ ಪಾಪ್ಯುಲರ್ ಫ್ರಂಟ್ ನ ಕಾರ್ಯ ಕ್ರಮವಾಗಿದೆ ಎಂದು ಜಯರಾಜನ್ ಹೇಳಿದರು.
             ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಪಿಎಫ್ ಐ ಕಚೇರಿಗಳ ಮೇಲೆ ದಾಳಿ ನಡೆಸಿತು ಮತ್ತು ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿರುವ ನಾಯಕರನ್ನು ಬಂಧಿಸಿತು. ಪಾಪ್ಯುಲರ್ ಫ್ರಂಟ್ ಇದೇ ದಾರಿಯಲ್ಲಿ ಹೋದರೆ ಅಲ್ಪಸಂಖ್ಯಾತರು ಮತ್ತು ಮುಸ್ಲಿಂ ಸಮುದಾಯ ಅವರನ್ನು ಪ್ರತ್ಯೇಕಿಸುತ್ತದೆ ಎಂದು ಜಯರಾಜನ್ ಹೇಳಿದರು. ಪಾಪ್ಯುಲರ್ ಫ್ರಂಟ್ ಅನ್ನು ಮುಸ್ಲಿಂ ಲೀಗ್ ರಕ್ಷಿಸುತ್ತಿದೆ ಎಂದು ಆರೋಪಿಸಿದರು.
            ಯಾವುದರ ಹೆಸರಲ್ಲಿ ಪಾಪ್ಯುಲರ್ ಫ್ರಂಟ್ ಹರತಾಳ ನಡೆಸುತ್ತಿದೆ. ಕಾನೂನು ಉಲ್ಲಂಘಿಸಿ ಹಿಂಸಾಚಾರ ಎಸಗಿದ್ದಕ್ಕಾಗಿ ಅವರನ್ನು ಬಂಧಿಸಲಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆಯು ಸಾಕ್ಷ್ಯಾಧಾರಗಳ ಆಧಾರದ ಮೇಲೆ ದೇಶದ ವಿವಿಧ ಪ್ರದೇಶಗಳಲ್ಲಿ ಬಂಧನಗಳು ಮತ್ತು ದಾಳಿಗಳನ್ನು ನಡೆಸಿದೆ ಎಂದು ಜಯರಾಜನ್ ಹೇಳಿದ್ದಾರೆ. ಪಾಪ್ಯುಲರ್ ಫ್ರಂಟ್ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿದ್ದು, ಹರತಾಳ ಜನವಿರೋಧಿಯಾಗಿದೆ ಎಂದರು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries