HEALTH TIPS

ವಿಶ್ವಕರ್ಮ ಸಮಾಜ ವತಿಯಿಂದ ವಿಶ್ವಕರ್ಮ ದಿನಾಚರಣೆ, ಸನ್ಮಾನ ಸಮಾರಂಭ



         ಕಾಸರಗೋಡು: ವಿಶ್ವಕರ್ಮ ಸಮಾಜ ವತಿಯಿಂದ ಉದುಮ ಎರೋಳ್ ಗ್ರಾಮ ಸಮಿತಿ ನೇತೃತ್ವದಲ್ಲಿ ವಿಶ್ವಕರ್ಮ ದಿನವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಗ್ರಾಮ ಸಮಿತಿ ಪೆÇೀಷಕ ರಾಜನ್.ಕೆ.ಆಚಾರಿ ಚಂದ್ರಾಪುರ ಸಮಾರಂಭ ಉದ್ಘಾಟಿಸಿದರು. ಸಂಘಟನೆ ಅಧ್ಯಕ್ಷ ಕೆ.ಶಶಿಧರ ಆಚಾರಿ ಅಧ್ಯಕ್ಷತೆ ವಹಿಸಿದ್ದರು.
             ವಿಶ್ವಕರ್ಮಸಮುದಾಯ ಸಂಘದ ಅಧ್ಯಕ್ಷ ಚಂದ್ರನ್ ಕರಿಪೆÇೀಡಿ, ಬೇಡಡ್ಕ ಗ್ರಾಮ ಸಮಿತಿ ಸದಸ್ಯ ಜಯರಾಮಕುಂಡಂಕುಳಿ ಉಪಸ್ಥಿತರಿದ್ದರು.  ಪಾರಂಪರಿಕ ಕುಲ ಕಸುಬಾಗಿರುವ ದೇವಸ್ಥಾನದ ಮರಗೆಲಸದಲ್ಲಿ ಡಾಕ್ಟರೇಟ್ ಪಡೆದ ಉದುಮ ಕೊಕ್ಕಾಲ್ ನಿವಾಸಿ ಪುಷ್ಪರಾಜ್ ಆಚಾರ್ಯ ಅವರನ್ನು ಗ್ರಾಮ ಸಮಿತಿ ಕಾರ್ಯದರ್ಶಿ ವಿಭೀಷ್ ಚಂದ್ರಾಪುರ ಸನ್ಮಾನಿಸಿದರು. ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದ ಅದ್ವೈತ್.ಎ.ಎನ್, ವೈದೇಹ್,  ಅಭಿನ್, ಅಕ್ಷಯ್, ಮಿಥುನ್.ವೈ, ಅಂಜನಾ ಕೃಷ್ಣನ್, ದೇವರ್ಚನಾ ಮತ್ತು ಎಐಟಿಟಿ (ಮಾಹಿತಿ ತಂತ್ರಜ್ಞಾನ)ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಥಮ ರ್ಯಾಂಕ್ ಪಡೆದ ಶರತ್‍ಕುಮಾರ್ ಅತ್ರಿಕುಳಿ ಹಾಗೂ ಆರ್ಕಿಟೆಕ್ಟ್‍ನಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದ ಗೋಕುಲದಾಸ್ ಪೆÇಯಿನಾಚಿ ಪರಂಬ್ ಅವರನ್ನು ಸನ್ಮಾನಿಸಲಾಯಿತು. ಏರೋಲ್ ಗ್ರಾಮ ಸಮಿತಿ ಜತೆ ಕಾರ್ಯದರ್ಶಿ ಶಿವದಾಸ್ ವೈ ಸ್ವಾಗತಿಸಿದರು. ಮಾತೃ ಸಮಿತಿ ಅಧ್ಯಕ್ಷೆ ಪುಷ್ಪಾ ಚಂದ್ರಾಪುರ ವಂದಿಸಿದರು.
          ಕಾರ್ಯಕ್ರಮದ ಅಂಗವಾಗಿ ಕಾಸರಗೋಡು ಪೆÇಲೀಸ್ ಠಾಣೆಯ ಸಿವಿಲ್ ಪೆÇಲೀಸ್ ಅಧಿಕಾರಿ ಪಿ.ಶಿವಕುಮಾರ್ ಅವರಿಂದ ಸೈಬರ್ ವಂಚನೆ ಬಗ್ಗೆ ತರಗತಿ ನಡೆಯಿತು. ವಿಶ್ವಕರ್ಮ ಜಯಂತಿ ಸಂಭ್ರಮದ ಅಂಗವಾಗಿ ವಿವಿಧ ಕ್ರೀಡಾ ಸ್ಪಧೆ ಹಾಗೂ ವಿವಿಧ ಕಲಾ ಕಾರ್ಯಕ್ರಮ ನಡೆಯಿತು.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries